ಬೆಂಗಳೂರು: ಇಂದು ಪ್ರೇಮಿಗಳ ದಿನಾಚರಣೆ ಹಿನ್ನೆಲೆ ವಾಟಾಳ್ ನಾಗರಾಜ್ ವಿಶೇಷ ರೀತಿಯಲ್ಲಿ ಆಚರಣೆ ಮಾಡಿದ್ದು ಕತ್ತೆಗಳಿಗೆ ಮದುವೆ ಮಾಡಿಸಿ ಪ್ರೇಮಿಗಳ ದಿನದ ಶುಭಕೋರಿದ್ದಾರೆ.
ಒಂದು ಕತ್ತೆಗೆ ಸೀರೆ, ಮತ್ತೊಂದು ಕತ್ತೆ ಪಂಚೆ ತೊಡಿಸಿ ಮದುವೆ ನಗರದ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ನಡೆದ ವಿನೂತನ ಮದುವೆ ಹಣ್ಣು, ತಾಂಬೂಲ ಸೇರಿದಂತೆ ಶಾಸ್ರ್ತೋಕ್ತವಾಗಿ ಕತ್ತೆಗಳಿಗೆ ಮದುವೆ ಕತ್ತೆಗೆ ತಾಳಿ ಹಾಕಿ ಮದುವೆ ಮಾಡಿಸಿದ ಕನ್ನಡ ಪಕ್ಷದ ವಾಟಾಳ್
![Demo](https://ainlivenews.com/wp-content/uploads/2023/12/spoorthi-1.jpg)
ವಿಶ್ವದೆಲ್ಲಡೆ ಇಂದು ಪ್ರೇಮಿಗಳು ಅವರ ದಿನ ಆಚರಣೆ ಮಾಡುತ್ತಿದ್ದಾರೆ ಅವರಿಗೆಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಲ್ಲರೂ ಪ್ರೀತಿಸಬೇಕು.. ಯಾರೂ ಕೂಡ ಹಿಂಜರಿಕೆ ಮಾಡಬಾರದು ಸರ್ಕಾರ ಪ್ರೇಮಿಗಳಿಗೆ ಪ್ರೋತ್ಸಾಹ ನೀಡಬೇಕು, ಭದ್ರತೆ ಕೊಡಬೇಕುಕಾನೂನಿನಲ್ಲಿ ಬದಲಾವಣೆ ಮಾಡಿ ಪ್ರೇಮಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು
ಪ್ರೇಮಿಗಳ ಭದ್ರತೆಗಾಗಿ ಸರ್ಕಾರದ ಕಾನೂನು ಜಾರಿ ಮಾಡಬೇಕು ಕಾಯಿದೆ ರೂಪಿಸಬೇಕು.. ಪ್ರೇಮಿಗಳಿಗೆ ಸರ್ಕಾರವೇ ಉತ್ತೇಜನ ಕೊಡಬೇಕು ಪ್ರತಿ ತಿಂಗಳಿಗೆ ಪ್ರೇಮಿಗಳಿಗೆ 1.50 ಲಕ್ಷ ರೂಪಾಯಿ ಪ್ರೋತ್ಸಾಹನ ಧನ ನೀಡಬೇಕುಯಾವುದೇ ಸಂಘಟನೆಗಳು ಪ್ರೇಮಿಗಳಿಗೆ ತೊಂದರೆ ಕೊಟ್ಟರೆ ಸಹಿಸಿಕೊಳ್ಳಲು ಆಗಲ್ಲ ಪ್ರೇಮಿಗಳಿಗೆ ತೊಂದರೆ ಕೊಡುವ ಸಂಘಟನೆಗಳ ವಿರುದ್ಧ ಸರ್ಕಾರ ಕ್ರಮ ತಗೋಬೇಕು ಎಂದು ಹೇಳಿದರು.
![](https://ainlivenews.com/wp-content/uploads/2024/01/Ad-Banner-copy-scaled.jpg)