ಬೆಂಗಳೂರು:- ರೇಣುಕಾಸ್ವಾಮಿ ಮರ್ಡರ್ ಕೇಸ್ ಗೆ ಟ್ವಿಸ್ಟ್ ಸಿಕ್ಕಿದ್ದು, ಕೊಳೆಯಾದ ದಿನ MLA ಆಪ್ತರೊಬ್ಬರು ಶೆಡ್ ಗೆ ಬಂದಿರುವ ವಿಚಾರ ಬೆಳಕಿಗೆ ಬಂದಿದೆ.
ಬೆಂಗಳೂರಿನ ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾ ಸ್ವಾಮಿ ಹತ್ಯೆ ನಡೆದಿತ್ತು. ಆ ಘಟನೆ ನಡೆದ ಬಳಿಕ ಅಲ್ಲಿಗೆ ಹಲವರು ಭೇಟಿ ನೀಡಿದ್ದರು. ಅವರ ಪೈಕಿ ಕಾರ್ತಿಕ್ ಪುರೋಹಿತ್ ಕೂಡ ಇದ್ದಾನೆ. ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರ ಕಚೇರಿಯಲ್ಲಿ ಕೆಲಸ ಮಾಡುವ ಈತ ಶೆಡ್ಗೆ ಬಂದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈತನ ಕಾರಿನಲ್ಲೇ ಪ್ರದೋಶ್ ಎಂಬಾತ ಹಣ ತಂದು ಈ ಕೇಸ್ ಮುಚ್ಚಿಹಾಕುವ ಪ್ರಯತ್ನ ಮಾಡಿದ್ದ ಎಂಬ ಮಾಹಿತಿ ಇದೆ. ಕಾರ್ತಿಕ್ ಪುರೋಹಿತ್ಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್ಗೆ ಸಂಬಂಧಪಟ್ಟಂತೆ ಕಾರ್ತಿಕ್ ಪುರೋಹಿತ್ ನೀಡುವ ಹೇಳಿಕೆನಿಂದ ಇನ್ನಷ್ಟು ಸಾಕ್ಷಿಗಳು ಸಿಗಲಿವೆ ಎಂದು ಹೇಳಲಾಗುತ್ತಿದೆ.