ಕಲಬುರಗಿ: ವರ್ಣ ಶಿಲ್ಪಿ ವೆಂಕಟಪ್ಪ ಪ್ರಶಸ್ತಿಗೆ ಭಾಜರಾಗಿರುವ ಕಲ್ಯಾಣ ಕರ್ನಾಟಕದ ಹಿರಿಯ ಚಿತ್ರಕಲಾವಿದ ಬಸವರಾಜ ಜಾನೆಯವರ ಅಭಿನಂದನಾ ಸಮಾರಂಭ ಇವತ್ತು ಕಲಬುರಗಿಯಲ್ಲಿ ಜರುಗಿತು.ನಗರದ ಕೆಇಬಿ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಶಾಸಕ ಅಲ್ಲಮ ಪ್ರಭು ಪಾಟೀಲ್ ಚಾಲನೆ ನೀಡಿದ್ರು..
ಖ್ಯಾತ ಕಲಾವಿದರಾದ ನಾಡೋಜ ಡಾ.ಜೆ ಎಸ್ ಖಂಡೇರಾವ್ ಡಾ.ವಿ ಜಿ ಅಂದಾನಿಹಾಗು ಡಾ.ಸೋಮಶೇಖರ್ ಅಪ್ಪುಗೆರೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ರು.. ಕಾರ್ಯಕ್ರಮ ಕುರಿತು ಶ್ರೀಮತಿ ಮಂಜುಳಾ ಜಾನೆ ಪ್ರಾಸ್ತಾವಿಕವಾಗಿ ಮಾತನಾಡಿದರು.