ಮಳೆ ಅವಾಂತರ: ಶೃಂಗೇರಿ ಶಾರದಾ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್!

ಚಿಕ್ಕಮಗಳೂರು:- ಭಾರೀ ಮಳೆಯಿಂದ ಶೃಂಗೇರಿ ಶಾರದಾ ಮಠಕ್ಕೆ ಸಂಪರ್ಕಿಸುವ ಪ್ಯಾರಲ್ ಮಾರ್ಗ ಜಲಾವೃತಗೊಂಡಿದೆ. ಪ್ಯಾರಲ್ ಮಾರ್ಗ, ಗಾಂಧಿ ಮೈದಾನ ಸಂಪೂರ್ಣ ಮುಳುಗಡೆಯಾಗಿದೆ. ಹೀಗಾಗಿ ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ಗದಗ: ಶ್ರಧ್ಧಾ ಭಕ್ತಿಯಿಂದ ಮೊಹರಂ ಹಬ್ಬ ಆಚರಣೆ! ನರಸಿಂಹವನದ ಬಳಿ ಇರುವ ಶೃಂಗೇರಿ ಮಠದ ಸಂಧ್ಯಾವಂದನೆ ಮಂಟಪದ ಒಳಗೂ ನೀರು ಹೊಕ್ಕಿದೆ. ಸಂಧ್ಯಾವಂದನೆ ಮಂಟಪ ಸಂಪೂರ್ಣ ಮುಳುಗುವ ಹಂತಕ್ಕೆ ತಲುಪಿದ್ದು, ಕೇವಲ ಮೂರು ಅಡಿಯಷ್ಟು ಬಾಕಿ ಇದೆ ಎನ್ನಲಾಗಿದೆ.