ಆ ಧ್ವನಿಗೆ ಮಾರು ಹೋದವರೇ ಇಲ್ಲ. ಭಾಷೆ ಮೇಲಿನ ಹಿಡಿತ. ಆ ಭಾಷೆಗೆ ತಕ್ಕಂತ ಭಾವನೆ. ಅಚ್ಚ ಕನ್ನಡ, ಸ್ವಚ್ಛ ಶೈಲಿ, ಪ್ರತೀ ಅಕ್ಷರಗಳಿಗೂ ಜೀವ ತುಂಬುವ ಸ್ವರವದು. ಆದ್ರೆ ಆ ಮಾಧುರ್ಯ ಕಂಠಸಿರಿಗೆ ನಿನ್ನೆ ವಿರಾಮ ಬಿದ್ದಿದೆ. ಖ್ಯಾತ ನಿರೂಪಕಿ ಅಪರ್ಣಾ ಕೊನೆಯುಸಿರೆಳೆದಿದ್ದಾರೆ. ಕನ್ನಡ ಕಸ್ತೂರಿಯನ್ನ ಉಣಬಡಿಸ್ತಿದ್ದ, ಎಲ್ಲರನ್ನೂ ನಕ್ಕು ನಲಿಸುತ್ತಿದ್ದ ಅಪರ್ಣಾರನ್ನ ಮಾರಕ ಕ್ಯಾನ್ಸರ್ ಕಾಯಿಲೆ, ಒಳಗಿಂದೊಳಕ್ಕೆ ತಿಂದು ಹಾಕಿದೆ.
ಬಿಜೆಪಿ ವಿರುದ್ದ 40% ಭ್ರಷ್ಟಾಚಾರದ ಆರೋಪ ಬಂದಾಗ ಈಡಿ, ಸಿಬಿಐ ಎಲ್ಲಿದ್ದವು? -ಮೊಹಮ್ಮದ್ ನಲಪಾಡ್
ಕೆಲ ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಪರ್ಣಾರಿಗೆ 57 ವರ್ಷ ಚಿರ ಯುವತಿ ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಮೂರು ದಿನದ ಹಿಂದೆಯಷ್ಟೆ ಆಸ್ಪತ್ರೆಗೆ ದಾಖಲಾಗಿದ್ದ ಅಪರ್ಣಾ, ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ 9:45ಕ್ಕೆ ತಮ್ಮ ಉಸಿರಿಗೆ ಶಾಶ್ವತ ವಿರಾಮ ನೀಡಿ ಇಹಲೋಕ ಯಾತ್ರೆ ಮುಗಿಸಿದ್ದಾರೆ. ತಮ್ಮ ಸ್ವಚ್ಛ ಮಾತುಗಳಿಂದಿಂದಲೇ ಪ್ರತಿಯೊಬ್ಬ ಕನ್ನಡಿಗನ ಮನದಲ್ಲಿ ನೆಲೆಯೂರಿದ್ದ ಅಪರ್ಣಾ ಅವರು ಇನ್ನಿಲ್ಲ ಎಂಬ ಸುದ್ದಿ ಬಣ್ಣದ ಲೋಕಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಕೇವಲ ತಮ್ಮ ಧ್ವನಿ ಹಾಗೂ ಸ್ಪಷ್ಟ ಕನ್ನಡ ಪದಗಳ ಬಳಕೆಯಿಂದಲೇ ಎಲ್ಲರ ಗಮನಸೆಳೆದಿದ್ದ ಅಪರ್ಣಾ ಅವರು ಇಂದು ನೆನಪು ಮಾತ್ರವಾಗಿದ್ದಾರೆ.
ನಿಜ… ಕರುನಾಡಿನ ಸ್ವಚ್ಛ ಕನ್ನಡದ ನಿರೂಪಕಿ. ಹರುಳು ಉರಿದಂತೆ ಮಾತನಾಡೋ ಕಣ್ಮಣಿ ಕಣ್ಮರೆಯಾಗಿದ್ದಾರೆ. ಇವರ ಸೊಗಸಾದ ನಿರೂಪಣೆಯನ್ನ ಕೇಳುತ್ತಿದ್ದರೆ ಕೇಳುತ್ತಲೇ ಇರಬೇಕು ಅನ್ನೋ ಆಕರ್ಷಣೆ. ಆದ್ರೆ ಅಪರ್ಣಾ ಅವರು ನಿಧನದ ಈಗಲೂ ಕನ್ನಡ ಭಾಷಾ ಪ್ರೇಮಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪರ್ಣಾ ಅವರ ಅಕಾಲಿಕ ನಿಧನಕ್ಕೆ ಕೋಟ್ಯಾಂತರ ಕನ್ನಡಿಗರು ಕಂಬನಿ ಮಿಡಿದಿದ್ದು, ಇದು ಸುಳ್ಳಾಗಲಿ ಎಂಬ ಆಶಾಭಾವನೆಯಲ್ಲೆ ಇದ್ದಾರೆ.
ಅಪರ್ಣಾ ಅವರ ನಿರೂಪಣೆ, ಅವರ ಕನ್ನಡದ ದನಿಯನ್ನ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಪರ್ಣಾ ಅವರ ಸಾವಿಗೆ ಕನ್ನಡ ಚಲನಚಿತ್ರರಂಗದ ಹಲವು ನಟ, ನಟಿಯರು ಭಾವಪೂರ್ಣ ನಮನ ಸಲ್ಲಿಸಿದ್ದಾರೆ. ಸೂಪರ್ ಸ್ಟಾರ್ ನಿರೂಪಕಿ ಅಂದ್ರೆ ಅಪರ್ಣಾ ಅವರೊಬ್ಬರೇ. ಕನ್ನಡಿಗರು ಮತ್ತೆ ಹುಟ್ಟಿ ಬಾ ಅಂತ ಇವರಿಗೆ ಹೇಳಬೇಕು ಎಂದು ಸಾಧು ಕೋಕಿಲಾ ಸ್ಮರಿಸಿಕೊಂಡಿದ್ದಾರೆ. ಹಿರಿಯ ನಟ ಪ್ರಣಯರಾಜ ಶ್ರೀನಾಥ್, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಹೀಗೆ ಹಲವಾರು ನಟ ನಟಿಯರು ಕಂಚಿನ ಕಂಠದ ಅಪರ್ಣಾರವರ ಅಂತಿಮ ದರ್ಶನ ಪಡೆದು ಮೌನ ಮುರಿದಿದ್ದಾರೆ. ಬನಶಂಕರಿಯ ಅಪರ್ಣಾರವರ ನೆಚ್ಚಿನ ಮನೆಯ ಬಳಿ ಅಂತಿಮದರ್ಶನಕ್ಕೆ ಅವಕಾಶ ಮಾಡಿದ್ದರಿಂದ ಹಲವಾರು ಗಣ್ಯರು ಆಗಮಿಸಿ ಕಣ್ಣೀರಿಟ್ಟಿರು.
ಖ್ಯಾತ ನಿರೂಪಕಿ ಅಪರ್ಣಾ ನಿಧನಕ್ಕೆ ಆಘಾತ ವ್ಯಕ್ತಪಡಿಸಿರುವ ನಟ ಕಿಚ್ಚ ಸುದೀಪ್ ಅವರು ನುಡಿನಮನ ಸಲ್ಲಿಸಿದ್ದಾರೆ. ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಸುದೀಪ್, ಇದು ನಿಜಕ್ಕೂ ದುಃಖಕರ ಸಂಗತಿ. ಅಪರ್ಣಾ ಮೇಡಂ, ಸ್ವಚ್ಛ ಕನ್ನಡದ ಆ ನಿಮ್ಮ ದನಿ ನಮ್ಮ ನಡುವೆ ಸದಾ ಶಾಶ್ವತ ಬರೆದು ಸಂತಾಪ ಸೂಚಿಸಿದ್ದಾರೆ.
ತಮ್ಮ ಧ್ವನಿಯ ಮೂಲಕ ಅಪರ್ಣಾ ಅವರು ಪ್ರತಿಯೊಬ್ಬ ಮೆಟ್ರೋ ಪ್ರಯಾಣಿಕರಿಗೆ ಪರಿಚಯ ಆಗಿದ್ದರು. ಆ ಧ್ವನಿ ಎಂದೆಂದಿಗೂ ಕೇಳಿಸುತ್ತಲೇ ಇರಬೇಕು ಎಂಬುದು ಅನೇಕರ ಆಸೆ. ಈ ಬಗ್ಗೆ ನಟ ಸೃಜನ್ ಲೋಕೇಶ್ ಮಾತನಾಡಿದ್ದು, ಮೆಟ್ರೋ ಇರುವವರೆಗೂ ಅಪರ್ಣಾ ಅವರ ವಾಯ್ಸ್ ಇರಬೇಕೆಂದು ಮನವಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಆ ಧ್ವನಿ ಬದಲಾಗಬಾರದು. ಜನರು ಅವರನ್ನು ಮರೆಯಬಾರದು. ಆ ಧ್ವನಿಯನ್ನು ಕೇಳಿದಾಗಲೆಲ್ಲ ಅಪರ್ಣಾ ಅವರ ಮುಖ ನಮ್ಮ ಕಣ್ಣ ಮುಂದೆ ಬರಬೇಕೆಂದು BMRCL ಬಳಿ ಸೃಜನ್ ಲೋಕೇಶ್ ಮನವಿ ಮಾಡಿದ್ದಾರೆ.
ಒಟ್ನಲ್ಲಿ.. ಆ ವಿಧಿಗೂ ಈ ಮುತ್ತಿನಂತ ಮಾತಿನ ಒಡತಿಯ ಮೇಲೆ ಪ್ರೀತಿ ಉಕ್ಕಿತೋ ಏನೋ? ಕ್ಯಾನ್ಸರ್ ಎಂಬ ರೋಗ ಒಕ್ಕರಿಸಿ ಜೀವ ಪಡೆದಿದೆ. ಮೋಸ್ಟ್ಲೀ ಆ ದೇವಲೋಕವೂ ಈ ಮಧುರ ಕನ್ನಡದ ಕಂಪು ಬೀರುವ ಅಪರ್ಣಾರನ್ನ ಆಹ್ವಾನಿಸಿತೋ ಏನೋ? ಬ್ರಹ್ಮನ ಬರಹದ ಲೀಲೆಗೆ ಸ್ವರ್ಗಾರೋಹಣ ಮಾಡಿದ ಈ ಧ್ವನಿ, ಭೂಲೋಕದಲ್ಲಿ ಅಮರತ್ವ ಪಡೆದಿದೆ ಅಂದ್ರೆ ತಪ್ಪಾಗಲ್ಲ.