ಬೆಂಗಳೂರು:- ಯಾವತ್ತು ಶಿಗ್ಗಾಂವಿ ಕ್ಷೇತ್ರ ನನ್ನ ಕೈಬಿಟ್ಟು ಹೋಗಲ್ಲ ಎಂದು ಬಸವರಾಜ್ ಬೊಮ್ಮಾಯಿ ಅಚ್ಚರಿ ಹೇಳಿಕೆ ನೀಡಿದ್ದಾರೆ
ನನ್ನ ಬಾಯ್ ಫ್ರೆಂಡ್ ಸ್ಪರ್ಮ್ ಬಳಸಿ ಮಗು ಪಡೆಯುತ್ತೀನಿ.. ಈ ರೀತಿ ಯುವನಿಗೆ ಹಿಂಸಿಸುತ್ತಿದ್ದ ಪತ್ನಿ!?
ಈ ಸಂಬಂಧ ಮಾತನಾಡಿದ ಅವರುಶಿಗ್ಗಾಂವಿ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಆಗಬೇಕೆಂದು ಪಕ್ಷ ತೀರ್ಮಾನ ಮಾಡುತ್ತೆ. ಪಕ್ಷ ಯಾರನ್ನೇ ನಿಲ್ಲಿಸಿದರೂ ನಮ್ಮ ಬೆಂಬಲ ಇದೆ ಎಂದರು.
ನನ್ನ ಮಗನ ಹೆಸರು ಕೇಳಿ ಬರೋದು ಸಹಜ. ಆದರೆ ಆಥರದ ಪ್ರಸ್ತಾವನೆ ನಮ್ಮ ಕಡೆಯಿಂದ ಇಲ್ಲ. ಇದರಲ್ಲಿ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಉದಾಸಿಗೇ ಕೊಡಲಿ, ಯಾರಿಗೇ ಕೊಡಲಿ ಅದು ಪಕ್ಷಕ್ಕೆ ಬಿಟ್ಟಿದ್ದು. ಯಾರಿಗೇ ಟಿಕೆಟ್ ಕೊಟ್ಟರೂ ನನಗೂ ಶಿಗ್ಗಾಂವಿ ಕ್ಷೇತ್ರಕ್ಕೂ ಇರುವ ಅವಿನಾಭವ ಬಾಂಧವ್ಯಕ್ಕೆ ಧಕ್ಕೆ ಬರಲ್ಲ. ಹಾಗಾಗಿ ಯಾರಿಗೆ ಟಿಕೆಟ್ ಕೊಟ್ರೂ ಶಿಗ್ಗಾಂವಿ ಕ್ಷೇತ್ರ ನನ್ನ ಕೈಬಿಟ್ಟು ಹೋಗಲ್ಲ. ನಾನು ಕ್ಷೇತ್ರದ ಜನತೆಯ ಮನೆ ಮಗ, ಅಣ್ಣ, ತಮ್ಮ, ಅವರ ಮನೆಯ ಸದಸ್ಯ ಎಂದು ಹೇಳಿದ್ದಾರೆ.
ನಾವೆಲ್ಲಾ ಮುಖ್ಯಮಂತ್ರಿಯಾಗಿ ಕೆಲಸವನ್ನ ಮಾಡಿದ್ದೇವೆ. ಬೇರೆಯವರಿಗೆ ಅವಕಾಶ ನೀಡೋಣ. ಮೈತ್ರಿ ಇರೋದ್ರಿಂದ ನಾವು ಹಿರಿಯರು ಸಹಕರಿಸಬೇಕಿದೆ. ಮೋದಿ ಮತ್ತೆ ಪ್ರಧಾನಿ ಆಗಬೇಕು ಅಂತ ಕೆಲಸ ಮಾಡಿದ್ವಿ. ನಮ್ಮ ಆಕಾಂಕ್ಷೆ ಯಾವುದೂ ಇಲ್ಲ ಎಂದಿದ್ದಾರೆ
ಕೇಂದ್ರ ಸಂಪುಟದಲ್ಲಿ ಉತ್ತರ ಕನ್ನಡ ಭಾಗಕ್ಕೆ ಪ್ರಾತಿನಿಧ್ಯ ಇಲ್ಲದ ವಿಚಾರವಾಗಿ ಮಾತನಾಡಿದ್ದು, ನಮ್ಮ ಪಕ್ಷ ದೇಶದ ಹಿತದೃಷ್ಟಿಯಿಂದ ಆಲೋಚಿಸುತ್ತದೆ. ಪ್ರಲ್ಹಾದ್ ಜೋಶಿ ಉತ್ತರ ಕರ್ನಾಟಕದವರು, ಸಮರ್ಥರು. ಜೋಶಿ ಈಗಾಗಲೇ 5 ವರ್ಷ ಕೆಲಸವನ್ನ ಮಾಡಿದ್ದಾರೆ. ಕ್ಯಾಬಿನೆಟ್ ವಿಸ್ತರಣೆಗೆ 2ನೇ ಹಂತ ಅನ್ನೋದು ಇಲ್ಲ. ಸಮಗ್ರ ದೇಶ ನೋಡಿ ಸಚಿವ ಸಂಪುಟ ಮಾಡಲಾಗುತ್ತೆ ಎಂದಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಮುಂದುವರಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಗ್ಯಾರಂಟಿ ಬಗ್ಗೆ ಆಡಳಿತ ಪಕ್ಷದಲ್ಲಿ ಕೆಲ ಗೊಂದಲ ಇವೆ. ರಾಜ್ಯ ಸರ್ಕಾರ ಗೊಂದಲಗಳಿಗೆ ಸ್ಪಷ್ಟನೆಯನ್ನ ಕೊಡ್ಬೇಕು. ಅದನ್ನ ನಾವು ಪ್ರಶ್ನೆ ಮಾಡುವುದಿಲ್ಲ ಎಂದರು.
![](https://ainlivenews.com/wp-content/uploads/2024/01/Ad-Banner-copy-scaled.jpg)