ಉತ್ತರಕನ್ನಡ: ಉರುಳು ಬಿಟ್ಟು ಕಾಡು ಹಂದಿಯನ್ನು ಕೊಂದು ಮಾಂಸ ಬೇಯಿಸಿಕೊಂಡು ಭಕ್ಷಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಆಂಕೋಲ ಯಾಲೂಕಿನ ಮಾಸ್ತಿಕಟ್ಟೆ ವಲಯ ವ್ಯಾಪ್ತಿಯ ಅಗಸೂರು ಗ್ರಾಮದ ಈರನ ಮೂಲೆ ಮಜಿರೆಯಲ್ಲಿ ನಡೆದಿದೆ.
ಈರನ ಮೂಲೆ ನಿವಾಸಿಗಳಾದ ಲಕ್ಷ್ಮಣ, ರಾಕು ಗೌಡ, ಶಾಂತಾ ಗಣಪತಿ ಗೌಡ, ಗಣಪತಿ ಸುಕ್ರು ಗೌಡ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಹಂದಿ ಮಾಂಸ ಮತ್ತು ಉರುಳನ್ನು ವಶಪಡಿಸಿಕೊಳ್ಳಲಾಗಿದೆ.
ಉಪ ವಲಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಅವರ ಮಾರ್ಗದರ್ಶನದಲ್ಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ವಲಯ ಅರಣ್ಯಾಧಿಕಾರಿ ರಾಘವೇಂದ್ರ ಮಳ್ಳಪ್ಪನವರ್, ಉಪ ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನ ಅಂಗಡಿ, ರಾಘವೇಂದ್ರ ಜೀರಗಾಳೆ, ರತೀಶ ನಾಯಕ, ಗೌಡಪ್ಪ ಅಂಗಡಿ, ಅರುಣ ನಡಕಟ್ಟೆ, ಅರಣ್ಯ ರಕ್ಷಕ ವೆಂಕಟೇಶ ಗುತ್ತೇದಾರ, ಅಬಲಪ್ಪ, ರುದ್ರಗೌಡ ಪಾಟೀಲ್ ,ಪ್ರಶಾಂತ, ಚನ್ನಪ್ಪ ಲಮಾಣಿ ರ್ಯಾಚರಣೆ ಪಾಲ್ಗೊಂಡಿದ್ದರು.
