ಬೆಂಗಳೂರು: ನಾಳೆ ಪವಿತ್ರವಾದ ರಂಜಾನ್ ಹಬ್ಬ ಹೀಗಾಗಿ ಮುಸಲ್ಮಾಂ ಬಾಂದವರು ಹಬ್ಬಕ್ಕೆ ಬಟ್ಟೆ ಅದು ಇದು ಅಂತ ಖರೀದಿಸೋದ್ರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.. ನಿನ್ನೆಯು ಸಹ ಕೆಲಸ ಮುಗಿಸಿ ಶಾಪಿಂಗ್ ಗೆ ಅಂತ ಹೋಗಿದ್ರು ಮೂವರು ಸ್ನೇಹಿತರು. ಅಂಗಡಿ ಬಳಿ ನಿಂತಿದ್ರು. ಚವರಾಯನ ಹಟ್ಟಹಾಸಕ್ಕೆ. ಇಬ್ಬರು ಇಹಲೋಕಕ್ಕೆ ಹೋಗಿದಾರೆ. ಮತ್ತೊಬ್ಬ ಆಸ್ಪತ್ರೆ ಪಾಲಾಗಿದ್ದಾನೆ.
ಹೀಗೆ ವೇಗವಾಗಿ ಬಂದಂತಹ ಟಾಟಾಎಸ್ ಒಂದಲ್ಲ ಅಂತ ಇಬ್ಬರ ಜೀವವನ್ನು ಬಲಿ ಪಡೆದುಕೊಂಡಿದೆ.. ಹೌದು.. ಮಂಗಳವಾರ ರಾತ್ರಿ 11_ಘಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು ಈ ದೃಶ್ಯ ನೋಡೋದಕ್ಕೆ ಭಯಂಕರವಾಗಿದೆ.. ಹೌದು ನಿಂತಿದ್ದ ಬೈಕಿಗೆ ಗೂಡ್ಸ್ ವಾಹನ ಡಿಕ್ಕಿಯಾದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ತಡರಾತ್ರಿ ರಾಜಗೋಪಾಲನಗರದ ಹೆಗ್ಗನಹಳ್ಳಿ ಬಳಿ ನಡೆದಿದೆ. ಮೊಹಮ್ಮದ್ ಫಾರೂಕ್ ಹಾಗೂ ಅಬ್ರಾರ್ ಅಹಮದ್ ಮೃತ ದುರ್ದೈವಿಗಳು ಎಂದು ಗೊತ್ತಾಗಿದೆ..
![Demo](https://ainlivenews.com/wp-content/uploads/2023/12/spoorthi-1.jpg)
ಕಾಫಿ ಪ್ರಿಯರಿಗೆ ಗುಡ್ ನ್ಯೂಸ್..! ಪ್ರತಿದಿನ 3 ಕಪ್ ಫಿಲ್ಟರ್ ಕಾಫಿ ಕುಡಿದರೆ ಡಯಾಬಿಟಿಸ್ ಕಂಟ್ರೋಲ್
ಮೂವರು ಯುವಕರು ರಾತ್ರಿ 11 ಗಂಟೆ ಸುಮಾರಿಗೆ ಹೆಗ್ಗನಹಳ್ಳಿ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದಿದ್ದ ಟಾಟಾ ಏಸ್ ವಾಹನ ನಿಯಂತ್ರಣ ತಪ್ಪಿ ಬೈಕಿಗೆ ಢಿಕ್ಕಿಯಾಗಿದೆ. ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲಿಯೇ ದುರ್ಮರಣ ಹೊಂದಿದ್ದಾರೆ. ಮೊಹಮ್ಮದ್ ಸಿದ್ದಿಕ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು,
ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಳಿಕ ಏಸ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೀಣ್ಯ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.. ಹಬ್ಬಕ್ಕೆ ಶಾಪಿಂಗ್ ಅಂತ ಹೋಗುತ್ತಿದ್ದ ಯುವಕರು ಮಸಣದ ಪಾಲಾಗಿದ್ದಾರೆ.. ಹಬ್ಬದ ಮನೆಯ ಯಲ್ಲಿ ಮಕ್ಕಳನ್ನು ನೋಡಿ ಖುಷಿ ಪಡಬೇಕಾಗಿದ್ದ ಪೋಷಕರ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ..
![](https://ainlivenews.com/wp-content/uploads/2024/01/Ad-Banner-copy-scaled.jpg)