ವಿಜಯನಗರ:-ಇಲ್ಲೊಂದು ಆಚರಣೆಯಿದೆ, ಇಲ್ಲಿ ಮುಳ್ಳುಗಳ ಮೇಲೆ ಯುವಕರು ಜಿಗಿಯುತ್ತಾರೆ, ಮುಳ್ಳಿನ ಮೇಲೆ ಕುಣಿದಾಡುತ್ತಾರೆ, ಮುಳ್ಳನ್ನು ಹಾಸಿಗೆ ಮಾಡಿಕೊಂಡು ಮಲಗುತ್ತಾರೆ. ಮುಳ್ಳಿನ ಮೇಲೆ ಜಿಗಿದಾಡಿದರೂ ಯುವಕರಿಗೆ ನೋವು ಆಗುವುದಿಲ್ಲವಂತೆ. ಎಲ್ಲವೂ ಆಂಜನೇಯ ಮಹಿಮೆ ಎಂಬ ನಂಬಿಕೆ ಇದೆ. ಮುಳ್ಳಿನ ಮೇಲೆ ಜಿಗಿದಾಡಿ ದೇಹ ದಂಡಿಸಿ ಹರಕೆ ತೀರಿಸುವುದು ಒಂದು ಸಂಪ್ರಾದಾಯವಿದೆ.
ಬಳ್ಳಾರಿ ಜಿಲ್ಲೆಯಾದ್ಯಂತ ಸಂಭ್ರಮದ ರಂಜಾನ್ ಆಚರಣೆ!
ಹೌದು, ಆಧುನಿಕ ಯುಗ, ತಂತ್ರಜ್ಞಾನ ಯುಗದಲ್ಲಿಯೂ ಮುಳ್ಳಿನ ಜಾತ್ರೆ, ಮುಳ್ಳು ಗದ್ದೆ ಉತ್ಸವ ನಡೆದಿದ್ದು, ವಿಜಯನಗರ ಜಿಲ್ಲೆಯ ನಾನಾ ಕಡೆ ಮುಳ್ಳಿನ ಮೇಲೆ ನಡೆದು ಪವಾಡಕ್ಕೆ ಯುಗಾದಿ ಹಬ್ಬ ಸಾಕ್ಷಿ ಆಗಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಕಿತ್ತನೂರು, ವಲ್ಲಭಾಪುರ ಗ್ರಾಮಗಳಲ್ಲಿ ಮುಳ್ಳುಗದ್ದಿ ಉತ್ಸವ ನಡೆದಿದ್ದು, ಆಂಜನೇಯ ಸ್ವಾಮಿ ಜಾತ್ರೆ ಪ್ರಯುಕ್ತ ನಡೆದ ಬ್ಯಾಟಿಗಿಡ (ಮುಳ್ಳು ಪವಾಡ) ಉತ್ಸವ ಜೋರಾಗಿತ್ತು.
ಮುಳ್ಳಿನ ಮೇಲೆ ನಡೆದು ಬಂದು ಭಕ್ತ ವೃಂದ ಭಕ್ತಿ ಸಮರ್ಪಿಸಿದ್ದಾರೆ. ತಲೆತಲಾಂತರಗಳಿಂದಲೂ ಬಂದ ಮುಳ್ಳು ಗದ್ದೆ ಉತ್ಸವ ಜೋರಾಗಿದೆ ನಡೆದು ಕೊಂಡು ಬಂದಿದ್ದು, ಎಲ್ಲರ ಗಮನ ಸೆಳೆದಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)