ಬೆಂಗಳೂರು: ರೇವ್ ಪಾರ್ಟಿಯಲ್ಲಿ ಕೇಸ್ ತನಿಖೆ ಚುರುಕುಗೊಳಿಸಿರೋ ಸಿಸಿಬಿ ಶಾಸಕನ ಪಾಸ್ ಹಾಕಿಕೊಂಡು ಬಂದಿದ್ದವನನ್ನ ಲಾಕ್ ಮಾಡಿದ್ದು, ವಿಡಿಯೋ ಮಾಡಿ ನಾಟಕ ಮಾಡಿದ ನಟಿ ಯನ್ನು ವಿಚಾರಣೆಗೆ ಕರೆದಿದ್ದು ಯಾವಾಗ ವಿಚಾರಣೆ ಹಾಜರಾಗುತ್ತಾರೆ ನಟಿ ಅನ್ನೋದರ ಕಂಪ್ಲೀಟ್ ಡಿಟೈಲ್ಸ್ ಈ ಸ್ಟೋರಿ ನೋಡಿ ಎಲೆಕ್ಟ್ರಾನ್ ಸಿಟಿ ಜೆ.ಆರ್.ಫಾರ್ಮ್ ಹೌಸ್ ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ತಗ್ಲಾಕಿಕೊಂಡಿರೊ ಪಾರ್ಟಿ ಆಯೋಜಕರಾದ ವಾಸು ,
ಅರುಣ್ ಕುಮಾರ್ ಸೇರಿ ಐವರು ಆರೋಪಿಗಳನ್ನ ಸಿಸಿಬಿ ಪೊಲೀಸರು ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಬರ್ತಡೇ ಪಾರ್ಟಿ ಹೆಸರಲ್ಲಿ ಮಾಡಿದ್ದ ರೇವ್ ಪಾರ್ಟಿಯಲ್ಲಿ ತೆಲಗು ನಟಿಯರು ಸೇರಿ ನೂರಾರು ಪುರಷ ಮಹಿಳೆಯರು ಪಾರ್ಟಿಯಲ್ಲಿ ಭಾಗಿಯಾಗಿದ್ದರು.ಪಾರ್ಟಿ ಆಯೋಜಕರನ್ನ ಬಂಧಿಸಿದ್ದ ಸಿಸಿಬಿ ಆರೋಪಿಗಳ ಅಕೌಂಟ್ ಗಳನ್ನ ಫ್ರೀಜ್ ಮಾಡಿದೆ. ಅಕೌಂಟ್ ಫ್ರೀಜ್ ಅಕೌಂಟ್ ನಲ್ಲಿದ್ದ ಹಣವನ್ನ ಸೀಜ್ ಮಾಡಿದೆ ಸಿಸಿಬಿ.
![Demo](https://ainlivenews.com/wp-content/uploads/2023/12/spoorthi-1.jpg)
500 Note Update: ನಿಮ್ಮ ಬಳಿ 500 ರೂಪಾಯಿ ನೋಟು ಇದ್ಯಾ..? ಕ್ಷಣಮಾತ್ರದಲ್ಲಿ ನೀವು ಆಗ್ಬೋದು ಮಿಲಿಯನೇರ್
ಆರೋಪಿ ಪಾರ್ಟಿ ಆಯೋಜನೆ ಗೆ ಪಾರ್ಟಿಯಲ್ಲಿ ಭಾಗಿಯಾಗಿದ್ದವರಿಂದ ಹಣ ಪಡೆದಿದ್ದಾರೆಂದು ಗೋತ್ತಾಗಿ ಪಾರ್ಟಿ ಆಯೋಜಕರಾದ ವಾಸು, ಅರುಣ್ ಕುಮಾರ್ ಸೇರಿ ಐವರ ಹಣ ಸೀಜ್ ಮಾಡಲಾಗಿದೆ.ಹೆಚ್ಚಿನ ತನಿಖೆಗೆ ಬಂಧಿತ ಆರೋಪಿ ಮೊಬೈಲ್ ಮೀರರ್ ಇಮೇಜ್ ಮಾಡಿ ಒಂದುಷ್ಟು ಡೇಟಾ ಸಂಗ್ರಹ ಮಾಡಲು ಮುಂದಾಗಿದ್ದಾರೆ.ಆರೋಪಿಗಳಾದ ವಾಸು, ಅರುಣ್ ಕುಮಾರ್ ಸೇರಿ ಐವರನ್ನ ಸೋಮವಾರ ಕಸ್ಟಡಿಗೆ ಪಡೆದುಕೊಳ್ಳಲಾಗುತ್ತಿದೆ ಎಂದು ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ.
ರೇವ್ ಪಾರ್ಟಿ ಕೇಸ್ ನಲ್ಲಿ ಎ೨ ಆರೋಪಿಯಾಗಿ ಬಂಧನ ಮಾಡಿರೋ ಅರುಣ್ ಕುಮಾರ್ ಆರೋಪಿ ಕೋರಮಂಗಲದಲ್ಲಿದ್ದುಕೊAಡು ರಿಯಲ್ ಎಸ್ಟೇಟ್ ಮಾಡಿಕೊಂಡಿದ್ದಾನೆ.ಆರೋಪಿ ವಾಸು ಅರುಣ್ ಕುಮಾರ್ ಸೇರಿ ಪಾರ್ಟಿ ಆಯೋಜನೆ ಮಾಡಿರೋ ಬಗ್ಗೆ ಸಿಸಿಬಿಗೆ ಮಾಹಿತಿ ಕಲೆ ಹಾಕಿದೆ.ಆರೋಪಿ ಅರುಣ್ ಅಂದ್ರಪ್ರದೇಶದ ಸಿಎಂ ಹಾಗೂ ವೈಆರ್ಪಿ ಪಕ್ಷದ ಮುಖಂಡರ ಜೊತೆ ಗುರುತಿಸಿಕೊಂಡಿರೋದು ಸಿಸಿಬಿ ತನಿಖೆ ವೇಳೆ ಬಯಲಿಗೆ ಬಂದಿದೆ.
ಸಿಸಿಬಿ ದಾಳಿಯ ವೇಳೆ ಕಾಕತಿ ಎಂಎಲ್ ಎ ಕಾಕಾತಿ ಗೋವರ್ಧನ್ ರೆಡ್ಡಿ ಎಂಬ ಎಂಎಲ್ ಎ ಪಾಸ್ ಪತ್ತೆಯಾಗಿತ್ತು.ಪಾಸ್ ವಿಚಾರವಾಗಿ ಹುಡುಕಾಟ ನಡೆಸಿದ್ದ ಸಿಸಿಬಿ ಹೈದರಬಾದ್ ಮೂಲದ ಪೂರ್ಣ ರೆಡ್ಡಿ ಎಂಬುವನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಿಸಿಬಿ ದಾಳಿ ವೇಳೆ ಎಸ್ಕೇಪ್ ಆಗಿದ್ದ ಪೂರ್ಣ ಪಾರ್ಟಿ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ.ಎಂಎಲ್ಎ ಕಾಕತಿ ಗೋವರ್ಧನ ರೆಡ್ಡಿಗೆ ಆಪ್ತನಾಗಿರುವ ಪೂರ್ಣನನ್ನ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ನಟಿ ಹೇಮಾಗೆ ಸಿಸಿಬಿ ಪೊಲೀಸರು ಆರೋಪಿಗಳ ಹೆಚ್ಚಿನ ವಿಚಾರಣೆ ಬಳಿಕ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಲಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)