ಲಂಚ ಪಡೆಯುವಾಗ ರಾಣೆಬೆನ್ನೂರಿನ ತಹಶೀಲ್ದಾರ್ ಲೋಕಾ ಬಲೆಗೆ!

ಹಾವೇರಿ : 12 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ರೆಡ್​ ಹ್ಯಾಂಡ್​ ಆಗಿ ರಾಣೆಬೆನ್ನೂರಿನ ತಹಶೀಲ್ದಾರ್ ಮತ್ತು ಚಾಲಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತಹಶೀಲ್ದಾರ್ ಹನುಮಂತ ಶಿರಹಟ್ಟಿ ಹಾಗೂ ಜೀಪ್ ಚಾಲಕ ಮಾಲತೇಶ ಮಡಿವಾಳರ ಸಿಕ್ಕಿಬಿದ್ದ ಆರೋಪಿಗಳು. ಅಕ್ರಮ ಸಾಗಣೆ ಮಾಡುತ್ತಿದ್ದ ಮರಳು ತುಂಬಿದ ಎರಡು ಲಾರಿಗಳನ್ನು ಬಿಡಲು ಇವರು ಲಂಚ ಪಡೆಯುತ್ತಿದ್ದರು. ಜೀಪ್ ಚಾಲಕ ಮಾಲತೇಶ ಲಂಚ ಪಡೆದುಕೊಂಡು ರಾಣೆಬೆನ್ನೂರು ನಗರದ ವೀರಭದ್ರೇಶ್ವರ ಬಡಾವಣೆಯಲ್ಲಿರುವ ತಹಶೀಲ್ದಾರ್ ಮನೆಯಲ್ಲಿ ಹನುಮಂತ ಶಿರಹಟ್ಟಿ ಅವರಿಗೆ ಕೊಡುವ ವೇಳೆ … Continue reading ಲಂಚ ಪಡೆಯುವಾಗ ರಾಣೆಬೆನ್ನೂರಿನ ತಹಶೀಲ್ದಾರ್ ಲೋಕಾ ಬಲೆಗೆ!