Facebook Twitter Instagram YouTube
    ಕನ್ನಡ     English     తెలుగు
    Sunday, January 29
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home » ಡಿ.ಕೆ.ಸುರೇಶ್, ಡಿ.ಕೆ.ಶಿವಕುಮಾರ್ ಭಾವಚಿತ್ರ ಸುಟ್ಟು ಬಿಜೆಪಿ ಪ್ರತಿಭಟನೆ

    ಡಿ.ಕೆ.ಸುರೇಶ್, ಡಿ.ಕೆ.ಶಿವಕುಮಾರ್ ಭಾವಚಿತ್ರ ಸುಟ್ಟು ಬಿಜೆಪಿ ಪ್ರತಿಭಟನೆ

    ain userBy ain userJanuary 5, 2022
    Share
    Facebook Twitter LinkedIn Pinterest Email

    ಚಾಮರಾಜನಗರ, ಜ.5- ರಾಮನಗರ ಕಾರ್ಯಕ್ರಮವೊಂದರಲ್ಲಿ  ಸಂಸದ ಡಿ.ಕೆ.ಸುರೇಶ್ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅವರ ಮೇಲೆ ಗೂಂಡಾಗಿರಿ ನಡೆಸಿರುವುದನ್ನು ಖಂಡಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು  ಸಂಸದ ಡಿ.ಕೆ.ಸುರೇಶ್,  ಕೆಪಿಸಿಸಿ  ಅಧ್ಯಕ್ಷ ಶಿವ‌ಕುಮಾರ್ ಭಾವಚಿತ್ರ ಸುಟ್ಟು ಪ್ರತಿಭಟನೆ ನಡೆಸಿದರು.
    ನಗರದ ಶ್ರೀಚಾಮರಾಜೇಶ್ವರ ಉದ್ಯಾನವನದ ಆವರಣದಲ್ಲಿ ಬಿಜೆಪಿ ಹಾಸನ ಜಿಲ್ಲಾ ಪ್ರಭಾರಿ, ಚಾಮರಾಜನಗರ ಜಿಲ್ಲಾ ಮುಖಂಡ ನಿಜಗುಣರಾಜು ಅವರ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆತಡೆ ನಡೆಸಿ, ಡಿ.ಕೆ.ಸುರೇಶ್, ಡಿ.ಕೆ.ಶಿವಕುಮಾರ್ ಭಾವಚಿತ್ರ ಸುಟ್ಟು ಅಕ್ರೋಶ ವ್ಯಕ್ತಪಡಿಸಿದರು.
    ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಬಿಜೆಪಿ ಹಾಸನ ಜಿಲ್ಲಾ ಪ್ರಭಾರಿ, ಚಾಮರಾಜನಗರ ಜಿಲ್ಲಾ ಮುಖಂಡ ನಿಜಗುಣರಾಜು ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಮನಗರಕ್ಕೆ ಆಗಮಿಸಿ 300 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಡಿ.ಕೆ.ಸುರೇಶ್  ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅವರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಉಪಮುಖ್ಯಮಂತ್ರಿಗಳು ಎನ್ನುವುದನ್ನೂ ಲೆಕ್ಕಿಸದೆ ಅವರ ಮೇಲೆ ಹಲ್ಲೆಗೆ ಮುಂದಾಗಿರುವುದು ಇವರ ಗೂಂಡಾವರ್ತನೆ ಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
    ಡಿ.ಕೆ.ಸುರೇಶ್ ವರ್ತನೆ  ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಮತ್ತು ಸಂಸ್ಕಾರವನ್ನು ತಿಳಿಸುತ್ತದೆ ಕನಕಪುರ ಕ್ಷೇತ್ರವನ್ನು ಒಂದು ಗೂಂಡಾ ರಾಜ್ಯ ಎಂದು ತಿಳಿದುಕೊಂಡಿದ್ದು, ಗೂಂಡಾಗಿರಿ ಮಾಡುತ್ತಿರುವ  ಸಹೋದರರು ನರೇಂದ್ರಮೋದಿ ನೇತೃತ್ವದಲ್ಲಿ ದೇಶ, ರಾಜ್ಯದಲ್ಲಿ ಬಿಜೆಪಿಯ ದೊಡ್ಡಸೈನ್ಯವಿದೆ ಎಂಬುದನ್ನು ತಿಳಿದುಕೊಳ್ಳಬೇಕು ಇಂತಹ ಗೂಂಡಾ ವರ್ತನೆಗೆ ಸಚಿವ ಅಶ್ವಥ್ ನಾರಾಯಣ್ ತಕ್ಕ ಉತ್ತರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ನಿಮ ಗೂಂಡಾಸಂಸ್ಕೃತಿಗೆ ತಕ್ಕ ಉತ್ತರ ನೀಡಲಿದ್ದಾರೆ . ಡಿ.ಕೆ.ಸುರೇಶ್ ಮತ್ತು ಡಿ.ಕೆ.ಶಿವಕುಮಾರ್ ತಮ್ಮ ಸ್ಥಾನಗಳಿಗೆ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಜಿ.ಪಂ.ಮಾಜಿ ಅಧ್ಯಕ್ಷ ಅಯ್ಯನಪುರ ಶಿವಕುಮಾರ್,  ನಗರಸಭಾ ಸದಸ್ಯ ಸುದರ್ಶನಗೌಡ, ಪಣ್ಯದಹುಂಡಿ ಸತೀಶ್,  ತಾ.ಪಂ.ಮಾಜಿ ಸದಸ್ಯ ಮಹೇಶ್, ದೊಡ್ಡಮೋಳೆ ರಂಗನಾಥ್, ರಂಗಸ್ವಾಮಿ, ಉಡಿಗಾಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಚಂದ್ರು, ಚಂದಕವಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯೇಂದ್ರ, ಯುವಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಶಿವುವಿರಾಟ್, ಮಂಗಲರವಿ, ನಾಗವಳ್ಳಿ ಶಕ್ತಕೇಂದ್ರದ ಅಧ್ಯಕ್ಷ ನಾಗಮಲ್ಲೇಶ, ಅಲೂರು ಗ್ರಾ.ಪಂ.ಸದಸ್ಯರಾದ ಶಿವಾನಂದ್, ಬಾಲರಾಜ್ ಇತರರು ಭಾಗವಹಿಸಿದ್ದರು.

    Demo
    Share. Facebook Twitter LinkedIn Email WhatsApp

    Related Posts

    ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಎಸ್‌ಟಿ ಮೀಸಲಾತಿಗಾಗಿ ಪಾದೆಯಾತ್ರೆ: ಕೆ.ಪಿ. ನಂಜುಂಡಿ ಭಾಗಿ

    January 29, 2023

    ಮೈಸೂರು ವಿವಿಯಲ್ಲಿ ರಾಜ್ಯ ಮಟ್ಟದ ಜಾನಪದ ಪ್ರಪಂಚ ಜಾನಪದ ಪ್ರಶಸ್ತಿ ಪ್ರದಾನ

    January 29, 2023

    ನಾಡಿನ ಶ್ರೇಷ್ಠ ಉದ್ಯಮಿ ಅಂಬಾದಾಸ್ ಕಾಮೂರ್ತಿ: ಶ್ರೀ ಶ್ರೀಮದ್ ಜಗದ್ಗುರು ಶಿವಶಂಕರ್ ಶಿವಾಚಾರ್ಯ ಮಹಾಸ್ವಾಮಿಗಳು

    January 29, 2023

    ಪ್ರಜಾಧ್ವನಿ ಯಾತ್ರೆಯಿಂದ ಬಿಜೆಪಿಗೆ ಭಯ ಶುರುವಾಗಿದೆ: ಸಿದ್ದರಾಮಯ್ಯ

    January 29, 2023

    ಸಿದ್ದರಾಮಯ್ಯ ತಾಕತ್ ಇದ್ದರೆ, ಸ್ವಂತ ಪಕ್ಷ ಕಟ್ಟಿ, ಬರೀ 5 ಸೀಟು ಗೆಲ್ಲಲಿ: ಕುಮಾರಸ್ವಾಮಿ

    January 29, 2023

    ಕಾಂಗ್ರೆಸ್ ಸರಕಾರ ರಾಜ್ಯವನ್ನು ಅಂಧಕ್ಕಾರದಲ್ಲಿ ಮುಳುಗಿಸುತ್ತೆ: ಅರುಣ್ ಸಿಂಗ್

    January 29, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.