ಹುಬ್ಬಳ್ಳಿ; ತಾಲೂಕಿನ ಛಬ್ಬಿ ಜಿನ ಮಂದಿರದಲ್ಲಿ ಪೂಜಾ ಪಾಠ ಸಂಗ್ರಹ ಶಾಸ್ತ್ರ ಬಿಡುಗಡೆ ಕಾರ್ಯಕ್ರಮ ಸೋಮದೇವ ಬಯ್ಯಾಜಿಯವರು ಧರ್ಮ ಬಂಧುಗಳು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಬೈಯಾಜಿ ಯವರು ಮಾತನಾಡಿ ದೇವ ಗುರು ಶಾಸ್ತ್ರ ಇವುಗಳಲ್ಲಿ ಶಾಸ್ತ್ರದಾನ ಬಹಳ ಮಹತ್ವವಾಗಿರುತ್ತದೆ ಒಂದು ಶಾಸ್ತ್ರದಲ್ಲಿ ಒಂದೇ ತರ ಇರುತ್ತದೆ ಈಗ ಈ ಶಾಸ್ತ್ರದಲ್ಲಿ ಎಲ್ಲ ಶಾಸ್ತ್ರಗಳನ್ನು ಒಳಗೊಂಡಿರುತ್ತದೆ.
ಎಲ್ಲಾ ಪೂಜ್ಯವಿಧಿ ವಿಧಾನಗಳು ಇದರಲ್ಲಿ ಇರುತ್ತವೆ ಕಾರಣ ತಾವುಗಳು ಈ ಶಾಸ್ತ್ರವನ್ನು ಪಡೆದು ಸ್ವದ್ಯಾಯ ಮಾಡಿ ವಿಧಿ ಪೂರ್ವಕ ಪೂಜಾ ಕಾರ್ಯಕ್ರಮ ಮಾಡಿರಿ ಎಂದು ತಿಳಿಸಿದರು. ಈ ಶಾಸ್ತ್ರವನ್ನು1000 ಪ್ರತಿಯನ್ನು ಶ್ರೀ ಮತಿ ಸರೋಜವ್ವ ಧರ್ಮಣ್ಣ ಕಾಗೆನವರ ಮುದ್ರಣ ಮಾಡಿ ಶಾಸ್ತ್ರದಾನ ಮಾಡಿರುತ್ತಾರೆ. ಮತ್ತು ಅವರು ಅತ್ತಿಮಬ್ಬೆ ಮಹಿಳಾ ಮಂಡಳಕ್ಕೆ ಮೂರು ಗುಂಟೆ ಭೂಮಿಯನ್ನು ದಾನವಾಗಿ ನೀಡಿರುತ್ತಾರೆ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈನ ಸಮಾಜ ಅಧ್ಯಕ್ಷರಾದ ದೇವೇಂದ್ರಪ್ಪ ಕಾಗೆನವರ ವಹಿಸಿದ್ದರು ದಾನಿಗಳು ಮತ್ತು,
ಅತ್ತಿಮಬ್ಬೆ ಮಹಿಳಾಮಂಡಳದ ಅಧ್ಯಕ್ಷರಾದ ಶ್ರೀಮತಿ ಸರೋಜವ್ವ ಕಾಗೆನವರ ಮಹಾವೀರ ಕಿತ್ತೂರ ಚಂದ್ರಪ್ಪ ಚಿಂಚಲಿ ಭಗವಂತ ಬಸಾಪುರ ಚಂದ್ರಪ್ಪ ನರೇಂದ್ರ ವರ್ಧಮನ ಹುಲ್ಲಂಬಿ ಅನಂತ ಕಲಘಟಗಿ ಚಂದ್ರಪ್ಪ ನಾಗರಳ್ಳಿ ಮತ್ತು ಶ್ರಾವಕ ಶ್ರಾವಕಿಯರು ಅತ್ತಿಮಬ್ಬೆ ಮೇಳ ಮಂಡಲದ ಸದಸ್ಯರು ಧರ್ಮ ಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಉಷಾ ಇಂಡಿ ಮಾಡಿದರು