ಮಳೆಯಿಂದಾಗಿ ಕಟಾವಿಗೆ ಬಂದಿದ್ದ ದಾಳಿಂಬೆ ಗಿಡದಲ್ಲೇ ಕೊಳೆಯುತ್ತಿದೆ: ರೈತರ ಕಣ್ಣೀರು!

ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹೈರಣಾಗಿದ್ದಾರೆ, ಕಟಾವಿಗೆ ಬಂದಿದ್ದ ದಾಳಿಂಬೆ ಮೇಲೆ ಮಳೆರಾಯ ಮುನಿಸಿಕೊಂಡಿದ್ದಾನೆ. ಇದರಿಂದ ಕಟಾವಿಗೆ ಬಂದಿದ್ದ ದಾಳಿಂಬೆಯನ್ನ ಸಕಾಲಕ್ಕೆ ಕಟಾವು ಮಾಡಲಾಗದೆ ತೋಟದಲ್ಲೆ ಕೊಳೆಯುತ್ತಿದೆ. ದಾಳಿಂಬೆ ತೋಟಗಳನ್ನು ನೋಡಿ ರೈತರು ಕಣ್ಣೀರು ಹಾಕುತ್ತಿದ್ದಾರೆ. ಮಾಡಿದ ಬೆಳೆ ಸಾಲ ತೀರಿಸುವುದು ಹೇಗೆ ಎಂದು ಅಳಲು ತೋಡಿಕೊಂಡಿದ್ದಾರೆ.