ಹೊಸಕೋಟೆ:- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಬಾಸ್ ತಪ್ಪು ಮಾಡಿಲ್ಲ ಅಂತ ಅಭಿಮಾನಿ ಓರ್ವ ಟವರ್ ಏರಿ ಕುಳಿತ ಘಟನೆ ಹೊಸಕೋಟೆಯ ನಿಡಘಟ್ಟ ಗ್ರಾಮದಲ್ಲಿ ನಿನ್ನೆ ರಾತ್ರಿ ಜರುಗಿದೆ.
ದರ್ಶನ್ ಅರೆಸ್ಟ್ ಪ್ರಕರಣ… ವರದಿ ಮಾಡಲು ತೆರಳಿದ್ದ ಪತ್ರಕರ್ತನ ಮೇಲೆ ಹಲ್ಲೆ..!
ಕಲ್ಬುರ್ಗಿ ಮೂಲದ ಯುವಕನಿಂದ ಹುಚ್ಚಾಟ ನಡೆಸಲಾಗಿದೆ. ಟವರ್ ಏರಿ ಕುಳಿತು ಹುಚ್ಚಾಟ ಹಿನ್ನೆಲೆ ಸ್ಥಳೀಯ ಪೊಲೀಸರಿಗೆ ಸ್ಥಳೀಯರು ಕರೆ ಮಾಡಿದ್ದಾರೆ. ಟವರ್ ಹತ್ತಿ ಕುಳಿತಿದ್ದ ಯುವಕನನ್ನ ಮನವೊಲಿಸಿ ಪೊಲೀಸರು ಕೆಳಗಿಳಿಸಿದ್ದಾರೆ. ಟವರ್ ನಿಂದ ಕೆಳಗಿಳಿದ ಬಳಿಕವೂ ನಟ ದರ್ಶನ್ ಗಾಗಿ ಹಂಬಲಿಸಿದ್ದಾನೆ. ಡಿ ಬಾಸ್ ತಪ್ಪೇ ಮಾಡಿಲ್ಲ, ಅವರನ್ನ ಬಿಟ್ಟು ಕಳಿಸಬೇಕು. ಇಲ್ಲದಿದ್ರೆ ನಾನು ಮತ್ತೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕಿದ್ದಾರೆ.
ಡಿ ಬಾಸ್ ಪೊಲೀಸ್ ಠಾಣೆಯಿಂದ ಹೊರ ಬರಲಿ, ಅವರ ಬದಲಿಗೆ ನಾನು ಶಿಕ್ಷೆ ಅನುಭವಿಸುತ್ತೇನೆ. ಕಳೆದ ರಾತ್ರಿ 11 ಗಂಟೆಯಿಂದ ಹುಚ್ಚಾಟದ ಮಾತುಗಳನ್ನೆ ಅಭಿಮಾನಿ ಹೇಳ್ತಿದ್ದಾನೆ. ಸಧ್ಯ ಕೂಲಿ ಕಾರ್ಮಿಕನಾಗಿರುವ ಯುವಕನ ಹುಚ್ಚಾಟ ಕಂಡು ಪೊಲೀಸರು ದಂಗಾಗಿದ್ದಾರೆ.