ವಿಜಯಪುರ: ವಿಜಯಪುರ ಜಿಲ್ಲೆಯಲ್ಲು ಸಿಂದಗಿ ತಾಲೂಕಿನಿಂದ ಬೇರ್ಪಟ್ಟ ಆಲಮೇಲ ಹೊಸ ತಾಲೂಕಾಗಿ ನಿರ್ಮಾಣಗೊಂಡಿದೆ. ಆದ್ರೆ ಹೊಸ ತಾಲೂಕಿಗೆ ಹಳ್ಳಿಗಳ ಸೇರ್ಪಡೆಯನ್ನ ಅವೈಜ್ಞಾನಿಕವಾಗಿ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಆಲಮೇಲ ಹೊಸ ತಾಲೂಕಾಗಿ ಘೋಷಣೆ ಮಾಡಿದ ಬಳಿಕ ಗಬಸಾವಳಗಿ ಗ್ರಾಮವನ್ನ ಆಲಮೇಲ ತಾಲೂಕಿಗೆ ಸೇರ್ಪಡೆ ಮಾಡಿದ್ದಾರೆ.
ಆದ್ರೆ ಗಬಸಾವಳಗಿ ಗ್ರಾಮದಿಂದ ಆಲಮೇಲ ತಾಲೂಕಾಕೇಂದ್ರ ಬರೊಬ್ಬರಿ 40 ಕಿ.ಮೀಟರ್ ಆದ್ರೆ ಸಿಂದಗಿ ಕೇವಲ 14 ಕೀ.ಮೀಟರ ದೂರದಲ್ಲಿದೆ. ಆದ್ರೆ ಗಬಸಾವಳಗಿಯನ್ನ ಸಿಂದಗಿಯಲ್ಲಿ ಉಳಿಸಿಕೊಳ್ಳುವ ಬದಲಿಗೆ ಆಲಮೇಲ ತಾಲೂಕಿಗೆ ಸೇರ್ಪಡೆ ಮಾಡಲಾಗಿದೆ. ಇದು ಗಬಸಾವಳಗಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಗಬಸಾವಳಗಿ ಗ್ರಾಮವನ್ನ ಅವೈಜ್ಞಾನಿಕವಾಗಿ 40 ಕೀ.ಮೀ ದೂರದಲ್ಲಿರೋ ಆಲಮೇಲಕ್ಕೆ ಸೇರಿಸಿದ್ದರಿಂಸ ಗ್ರಾಮದ ಜನರು ದಾಖಲಾತಿ, ನಿತ್ಯ ಕೆಲಸಗಳಿಗೆ ಪರದಾಡುವಂತಾಗಿದೆ. ಆಲಮೇಲ ತಾಲೂಕಿಗೆ ಸೇರ್ಪಡೆಯಾಗಿರೋ ಗಬಸಾವಳಗಿಯಿಂದ ತಾಲೂಕಾಕೇಂದ್ರ ತಲುಪಲು ಸಿಂದಗಿಯಿಂದ 40 ಕಿ.ಮೀಟರ್ ಸುತ್ತುವರೆದು ಹೋಗಬೇಕಾಗುತ್ತೆ.
ಆದ್ರೆ ಸಿಂದಗಿ ಕೇವಲ 14 ಕಿ.ಮೀಟರ್ ದೂರದಲ್ಲಿದ್ರು ರಾಜಕೀಯ ವೈಷಮ್ಯಕ್ಕೆ ಗಬಸಾವಳಗಿ ಗ್ರಾಮವನ್ನ ಆಲಮೇಲ ತಾಲೂಕಿಗೆ ಸೇರಿಸಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕ್ತಿದ್ದಾರೆ. ಈ ಕ್ರಮವನ್ನ ತಕ್ಷಣಕ್ಕೆ ಕೈಬಿಟ್ಟು ಗಬಸಾವಳಗಿ ಗ್ರಾಮವನ್ನ ಸಿಂದಗಿ ತಾಲೂಕಿಗೆ ಸೇರಿಸಬೇಕು ಎಂದು ಗ್ರಾಮಸ್ಥರು ಪಕ್ಷಾತೀತವಾಗಿ ಆಗ್ರಹಿಸುತ್ತಿದ್ದಾರೆ. ಇಲ್ಲದೆ ಹೋದರೆ ಅಧಿಕಾರಿ, ಶಾಸಕರ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆಯನ್ನ ಗಬಸಾವಳಗಿ ಗ್ರಾಮಸ್ಥರು ನೀಡಿದ್ದಾರೆ.