ಬೆಂಗಳೂರು:- ನೀಟ್ ಪರೀಕ್ಷೆಯಲ್ಲಿ ಅಕ್ರಮವಾಗಿದ್ದರ ಬಗ್ಗೆ ಕೇಂದ್ರ ಸರ್ಕಾರದ ಮೌನ ಖಂಡಿಸಿ ಯುವ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ ಜರುಗಿದೆ.
Bengaluru Power Cut: ರಾಜಧಾನಿಯಲ್ಲಿ ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ, ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ
ರೇಸ್ ಕೋರ್ಸ್ ಬಳಿಯಿರುವ ಕಾಂಗ್ರೆಸ್ ಭವನದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ನೇತೃತ್ವದಲ್ಲಿ ಪ್ರತಿಭಟನೆ ಜರುಗಿದೆ. ರೇಸ್ ಕೋರ್ಸ್ ಬಳಿಯಿರುವ ಕಾಂಗ್ರೆಸ್ ಭವನದಲ್ಲಿ ಮುಂದೆ ಪ್ರತಿಭಟನೆ ನಡೆಯುತ್ತಿದೆ.
ಪ್ರತಿಭಟನೆಯಲ್ಲಿ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ನಲಪಾಡ್, ಮಂಜುನಾಥ ಸೇರಿದಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಯುವ ಕೈ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.
ಇದೇ ವೇಳೆ ಮಾತನಾಡಿದ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮಾತನಾಡಿ, ಇವತ್ತು ಉಗ್ರ ಹೋರಾಟ, ಪ್ರತಿಭಟನೆ ಮಾಡಿದ್ದೇವೆ. ನೀಟ್ ಪರೀಕ್ಷೆಯನ್ನ ೩೩ ಲಕ್ಷ ವಿಧ್ಯಾರ್ಥಿಗಳು ಬರೆದಿದ್ದಾರೆ. ನೆಟ್ ಪರೀಕ್ಷೆಯ ಲೋಪದಿಂದ ೯ ಲಕ್ಷ ಯುಜಿಸಿ ವಿಧ್ಯಾರ್ಥಿಗಳಿಗೆ ಅನ್ಯಾಯ ಆಗಿದೆ. ಗುಜರಾತ್ ನಲ್ಲಿ OMR ನಲ್ಲಿಯೇ ಅಕ್ರಮ ವಾಗಿದೆ. ೬೭ ಜನಕ್ಕೆ ಹೇಗೆ 1st ರ್ಯಾಂಕ್ ಕೊಡೋಕೆ ಆಗುತ್ತೆ. ೭೨೦ ಅಂಕ ಹೇಗೆ ಪಡೆಯೋಕೆ ಆಗುತ್ತೆ. ಪೋನ್ ನಲ್ಲಿ ಯುದ್ಧ ನಿಲ್ಲಿಸ್ತೀನಿ ಅಂತಿರಾ.ಮೊದಲು ಪೇಪರ್ ಲೀಕ್ ಬಗ್ಗೆ ಮಾತಾಡಿ, ಪ್ರಧಾನಿ ಮೋದಿ ಅವರೇ. ಧರ್ಮೇಂದ್ರ ಪ್ರಧಾನ್ ಮೊದಲು ಅಕ್ರಮ ಆಗಿಲ್ಲ ಅಂದ್ರು.ಅಮೇಲೆ ಸ್ವಲ್ಪ ಅಕ್ರಮ ಆಗಿದೆ ಅಂತಾರೆ
ಲೋಟ, ಚಂಬು,ಹಂಡೆ ಏನ್ ಕದ್ರು ಕಳ್ಳನೇ . ಈಗ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದೀವಿ. ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಬೇಕು. ಇಲ್ಲವಾದರೆ ಕೇಂದ್ರ ಸಚಿವರ ಮನೆ ಮುಂದೆ ಪ್ರತಿಭಟನೆ ಮಾಡಿ ಹೋರಾಟ ಮಾಡ್ತೀವಿ ಎಂದರು.
ಇನ್ನೂ ಇದೇ ವೇಳೆ ರಾಜಭವನಕ್ಕೆ ಮುತ್ತಿಗೆ ಹಾಕಲು ಯುವ ಕಾಂಗ್ರೆಸ್ ಕಾರ್ಯಕರ್ತರು ಮುಂದಾದರೂ ಈ ವೇಳೆ ಪೊಲೀಸರು ತಡೆದು ಪ್ರತಿಭಟನಕಾರರನ್ನು ಪೊಲೀಸರು BMTC ಬಸ್ ನಲ್ಲಿ ಕರೆದೊಯ್ದಿದ್ದಾರೆ.