ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಶ್ರೀ ಗುರು ನಾಯಕನಹಟ್ಟಿ ಶ್ರೀ ಗುರು ತಿಪ್ಪೇಸ್ವಾಮಿ ಜಾತ್ರೆ ಮಹೋತ್ಸವದಲ್ಲಿ ಸಾವಿರಾರು ಭಕ್ತಜನಸಾಗರವೇ ಹರಿದು ಬಂದಿದೆ. ರಾಜ್ಯದಲ್ಲಿ ಎರಡನೇ ಜಾತ್ರೆ ಎಂದು ಖ್ಯಾತಿ ಪಡೆದಿರುವ ಶ್ರೀ ನಾಯಕನಹಟ್ಟಿ ಶ್ರೀ ಗುರು ತಿಪ್ಪೇಸ್ವಾಮಿರುದ್ರಸ್ವಾಮಿಯ ಜಾತ್ರೆಯೂ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ.
ಕಳೆದ ಐದು ವರ್ಷಗಳಲ್ಲೇ ಅತ್ಯಂತ ಶುದ್ದ ಗಾಳಿ ; ಮಾಲಿನ್ಯ ಸುಧಾರಣೆಯತ್ತ ದೆಹಲಿ
ಭಕ್ತಾದಿಗಳು ಬಿಸಿಲುನ್ನೂ ಕೂಡ ಲೆಕ್ಕಿಸದೆ ಶ್ರೀ ತಿಪ್ಪೇಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಂಡ ರಥದ ಹಗ್ಗವನ್ನು ಎಳೆದು, ರಥಕ್ಕೆ ಬಾಳೆ ಹಣ್ಣು, ತೂರುಮೇಣಸು ಮಡಕ್ಕಿಯನ್ನ ತೋರಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಶ್ರೀ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಯ ಮೊದಲ ಬಾವುಟ ಬೆಂಗಳೂರು ಮೂಲದ ತೇಜಸ್ವಿ ಅರದ್ಯ ರವರು ಸುಮಾರು 63 ಲಕ್ಷಕ್ಕೆ ಬಾವುಟವನ್ನ ತಮ್ಮದಾಗಿಸಿಕೊಡಿದ್ದಾರೆ.