ಕೋಲಾರ: ದಕ್ಣಿಣ ಕಾಶಿ ಅಂತನೆ ಹೆಸರು ಪಡೆದುಕೊಂಡಿರುವ ವಿಶ್ವೇಶ್ವರನ ಸನ್ನಿಧಿಯಲ್ಲಿ ಗಂಗೆ ಹರಿಯುತ್ತಿದ್ದರೂ ಕೂಡಾ ಅಲ್ಲಿ ಕೋತಿಗಳಿಗೆ ಮಾತ್ರ ಕುಡಿಯಲು ನೀರಿಲ್ಲ ತಿನ್ನಲು ಅನ್ನವಿಲ್ಲದೆ, ಆಶ್ರಯ ಪಡೆಯಲು ನೆರಳಿಲ್ಲದೆ ಪರದಾಡುತ್ತಿರುವ ರಾಮನ ಬಂಟರು. ಕೋಲಾರ ಸಂಸದ ಎಸ್.ಮುನಿಸ್ವಾಮಿ ಹಾಗೂ ಮುಖಂಡರು. ಚಿನ್ನದ ನಾಡಿನ ಪ್ರಸಿದ್ದ ಯಾತ್ರಾಸ್ಥಳ ಅಂತರಗಂಗೆಯಲ್ಲಿ ಕೋತಿಗಳಿಗೆ ಕಲ್ಲಂಗಡಿ, ಬಾಳೆಹಳ್ಳು, ಸೌತೇಕಾಯಿ ಇನ್ನಿತರೆ ತರಕಾರಿಗಳನ್ನು ವಿತರಿಸಿ ಕೋತಿಗಳ ಹಸಿವನ್ನು ನೀಗಿಸಿದ್ದಾರೆ.
ಸಂಸದ ಮುನಿಸ್ವಾಮಿ ಅಂತರಗಂಗೆ ಬೆಟ್ಟಕ್ಕೆ ಭೇಟಿ ನೀಡಿ, ಬೇಸಿಗೆ ಮುಗಿಯುವವರೆಗೂ ನಿತ್ಯ ಇಲ್ಲಿರುವ ನೂರಾರು ಸಂಖ್ಯೆಯಲ್ಲಿನ ಕೋತಿಗಳಿಗೆ ಬಾಳೆ ಹಣ್ಣು, ತರಕಾರಿ, ಕಲ್ಲಂಗಡಿ, ಸೌತೇಕಾಯಿ ಸೇರಿದಂತೆ ವಿವಿಧ ಹಣ್ಣುಗಳು ಹಾಗೂ ಅನ್ನ ಆಹಾರ ನೀರು ಒದಗಿಸುವಂತೆ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ವೈಯಕ್ತಿಕವಾಗಿ ಹಣವನ್ನು ನೀಡಿ ತಮ್ಮ ಕಾರ್ಯಕರ್ತರಿಗೆ ನಿತ್ಯ ಇಲ್ಲಿರುವ ಕೋತಿಗಳಿಗೆ ಆಹಾರ ನೀಡುವಂತೆ ತಿಳಿಸಿದ್ದಾರೆ. ಬೇಸಿಗೆ ಆರಂಭವಾಗಿದ್ದು ಬಿರು ಬಿಸಿಲಿನಿಂದ ಬೆಂದು ಹೋಗಿರುವ ಕೆಲವು ಕೋತಿಗಳು ನಿತ್ರಾಣ ಸ್ಥಿತಿ ತಲುಪಿವೆ.
ಕೆಲವು ಕೋತಿಗಳಲ್ಲಿ ಮುಖದ ಮೇಲೆ ಹಾಗೂ ಮೈಮೇಲೆ ಕೆಂಪು ಬಣ್ಣದ ಗುಳ್ಳೆಗಳಾಗಿ ಗಾಯಗಳಾಗಿ ರೋಗ ಬಂದಂತೆ ಕಾಣಿಸುತ್ತಿವೆ. ಕಳೆದ ಹಲವು ವರ್ಷಗಳಿಂದ ಪ್ರತಿ ಬೇಸಿಗೆಯಲ್ಲಿ ಅಂತರಗಂಗೆಯಲ್ಲಿನ ಕೋತಿಗಳಿಗೆ ಅನ್ನ ನೀರು ಹಣ್ಣು ಹಂಪಲುಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಬೇಸಿಗೆ ಆರಂಭದಲ್ಲೇ ಮಿತಿ ಮೀರಿದ ತಾಪಮಾನ ಕೋಲಾರದಲ್ಲಿ ದಾಖಲಾಗಿದೆ. ಈ ಪರಿಣಾಮವಾಗಿ ಬೆಟ್ಟದಲ್ಲಿನ ಮರಗಳು ಒಣಗಿದ್ದು ಕೋತಿಗಳು ಆಶ್ರಯ ಪಡೆಯಲು ನೆರಳು ಇಲ್ಲದಂತಾಗಿದೆ. ಸಂಸದ ಮುನಿಸ್ವಾಮಿ ಸದ್ಯ ಬೇಸಿಗೆ ಕಳೆಯುವವೆರೆಗೆ ಕೋತಿಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹಾಗಾಗಿ ಸಂಸದರ ಈ ಕಾರ್ಯಕ್ರಮಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಂತರಗಂಗೆ ಬೆಟ್ಟದಲ್ಲಿ ವರ್ಷದ 365 ದಿನಗಳು ಗಂಗೆ ಹರಿದರೂ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಇಲ್ಲಿರುವ ಪ್ರಾಣಿ ಪಕ್ಷಿಗಳು ಹಸಿವಿನಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಪ್ರಾಣಿಪ್ರಿಯರು ಹಾಗೂ ದಾನಿಗಳ ನೆರವಿನಿಂದ ಇಲ್ಲಿರುವ ಪ್ರಾಣಿಗಳಿಗೆ ಜೀವ ಬಂದಿದೆ ಆದರೂ ಅರಣ್ಯ ಇಲಾಖೆ ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಅನ್ನೋದು ಸ್ಥಳೀಯರ ಆಗ್ರಹ.