ಚಾಮರಾಜನಗರ: ಸಚಿವರ ಪ್ರಗತಿ ಪರಿಶೀಲನಾ ಸಭೆ..! ಮೊಬೈಲ್ ನಲ್ಲೇ ಮುಳುಗಿ ಹೋದ ಅಧಿಕಾರಿಗಳು!

ಚಾಮರಾಜನಗರ:- ಜಿಲ್ಲೆಯಲ್ಲಿ ಸಚಿವರಾದ ಕೆ.ವೆಂಕಟೇಶ್ ಹಾಗು ಎಚ್.ಸಿ.ಮಮಹದೇವಪ್ಪ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ.. 2 ನೇ ದಿನಕ್ಕೆ ಕಾಲಿಟ್ಟ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ! ಜಿಪಂ ಸಭಾಂಗಣದಲ್ಲಿ ಸಭೆ ನಡೆದಿದೆ. ಆದ್ರೆ ಸಭೆಯಲ್ಲಿ ಅಧಿಕಾರಿಗಳು ಮೊಬೈಲ್‌ನಲ್ಲಿ ತಲ್ಲೀನರಾದರು. ಒಂದೆಡೆ ಗಂಭೀರ ಚರ್ಚೆಗಳು ನಡೆಯುತ್ತಿದ್ದರೆ ಕೆಲವು ಅಧಿಕಾರಿಗುಳು ಡೋಂಟ್‌ಕೇರ್ ಎಂದಿದ್ದಾರೆ. ವಾಟ್ಸಪ್, ಫೇಸ್‌ಬುಕ್ ನೋಡುವುದರಲ್ಲಿ ಅಧಿಕಾರಿಗಳು ತಲ್ಲೀನರಾಗಿದರು. ಕೆಲವರು ‌ಮೊಬೈಲ್ ಫೋನ್‌ನಲ್ಲಿ ಮಾತನಾಡುವುದರಲ್ಲಿ ಬಿಜಿ ಆಗಿದ್ದರು. ಸಭೆಯ ಗಾಂಭೀರ್ಯತೆಯನ್ನು ಅಧಿಕಾರಿಗಳು ಮರೆತಿದ್ದಾರೆ.