ಮೈಸೂರು: ನಾಳೆ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತದ ವಿಶ್ವ ಕಪ್ ಗೆದ್ದು ಬರಲಿ ಎಂದು ಕ್ರಿಕೆಟ್ ಪ್ರೇಮಿಗಳಿಂದ ವಿದ್ಯಾರ್ಥಿಗಳ ಜೊತೆ ಸೇರಿ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಭಾರತದ ತಂಡದ ಆಟಗಾರರ ಭಾವಚಿತ್ರ ಹಿಡಿದು ಭಾರತದ ತಂಡದ ಆಟಗಾರರಿಗೆ ಶುಭಕೋರಿ ಹಾಗೂ ಗೆದ್ದು ಬಾ ಗೆದ್ದು ಬಾ ಬಾರತ ಗೆದ್ದು ಬಾ, ನಮ್ಮದೇ ನಮ್ಮದೇ ವಿಶ್ವಕಪ್ ನಮ್ಮದೇ, ಹಲವಾರು ಘೋಷಣೆ ಕೂಗುತ್ತಾ ಶುಭ ಹಾರೈಸಿದರು,
ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ. ಪ್ರಕಾಶ್ ರವರು ಮಾತನಾಡಿ ವಿಶ್ವಕಪ್ ನಲ್ಲಿ ಭಾರತದ ತಂಡವು ಸತತವಾಗಿ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಎಉ ಬಂದಿದ್ದು ಕ್ರಿಕೇಟ್ ಪ್ರೇಮಿಗಳ ಮನವನ್ನು ಗೆದ್ದಿದೆ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಪ್ರತಿಯೊಬ್ಬ ಆಟಗಾರರೂ ಸಹ ಅತ್ಯುತ್ತಮ ಸಮನ್ವತೆ ಮತ್ತು ಸಮರ್ಥ ಪ್ರದರ್ಶನದಿಂದಾಗಿ ಈ ಭಾರಿ ವಿಶ್ವಕಪ್ ಗೆಲ್ಲಲಿದೆ ಎಂದರು.

ಚೀನಾದಲ್ಲಿ ಹೈ ಸ್ಪೀಡ್ ಇಂಟರ್ನೆಟ್ ಅನಾವರಣ: ಒಂದು ಸೆಕೆಂಡ್ ಗೆ 100 ಜಿಬಿ ನೆಟ್!
ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನರೇಂದ್ರ ಮೋದಿ ಬಂದಿ ವೀಕ್ಷಣೆ ಮಾಡುತ್ತಿರುವುದು ನಮ್ಮ ಭಾರತದ ತಂಡದ ಆಟಗಾರರಿಗೆ ಇದೊಂದು ಸ್ಪೂರ್ತಿ ಇದೇ ಸಂದರ್ಭದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕ್ರಿಕೆಟ್ ಪ್ರೇಮಿಗಳಾದ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ , ಲೋಹಿತ್, ಸುಚಿಂದ್ರ, ಧರ್ಮೇಂದ್ರ, ಪುರುಷೋತ್ತಮ್, ಮಲ್ಲೇಶ, ಹಾಗೂ ಇನ್ನಿತರರು ಕ್ರಿಕೆಟ್ ಪ್ರೇಮಿಗಳು ಭಾರತಕ್ಕೆ ಶುಭ ಹಾರೈಸಿದರು

