ಹಾವೇರಿ: ಹಾಸನದಲ್ಲಿ ವಿಕೃತ ಕಾಮಿ ಇದ್ದಾನೆ. 2800 ಮಹಿಳೆಯರ ಜೀವನ ಹಾಳು ಮಾಡಿದ್ದಾನೆ ಆದ್ದರಿಂದ ಈ ಚುನಾವಣೆಯಲ್ಲಿ ಮಹಾಪ್ರಭುವನ್ನ ಕೆಳಗಡೆ ಇಳಿಸಬೇಕು ಎಂದು ಹಾವೇರಿಯಲ್ಲಿ ನಟ ಪ್ರಕಾಶ್ ರೈ ಆಗ್ರಹಿಸಿದ್ದಾರೆ. ಕಾರ್ಮಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಆತಂಕವಾದಿಗಳ ಸರ್ಕಾರ ಕೇಂದ್ರದಲ್ಲಿ ಇದೆ. ಉದ್ಯೋಗದ ಗ್ಯಾರಂಟಿ ಇಲ್ಲ. ಕಳೆಪೆ ಮಟ್ಟದ ಆಹಾರ ನೀಡುತ್ತಿದೆ ಸರ್ಕಾರ, ಆಗಾಗ್ಗೆ ಬಿಟ್ಟಿ ಭಾಗ್ಯ ಕೊಡುವುದು, ಮುಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
![Demo](https://ainlivenews.com/wp-content/uploads/2023/12/spoorthi-1.jpg)
ಇನ್ನೂ ಈಗ ಧರ್ಮ, ಜಾತಿ ಮಂದಿರ ಹಾಗೂ ಮಾಂಗಲ್ಯ ಬಗ್ಗೆ ಮಾತನಾಡುತ್ತಿದ್ದಾರೆ. ಬೆಂಬಲ ಬೆಲೆ ಕೇಳಿದರೆ, ರಸ್ತೆ ಅಗೆದು , ವಾಟರ್ ಗನ್ ಒಡೆದು ತುಕಡಿ ತುಕಡಿ ಗ್ಯಾಂಗ್ ಅಂತಾರೆ. ಚುನಾವಣೆಯ ಚಾಣಕ್ಯ ಈ ಬಗ್ಗೆ ಮಾತನಾಡಿಲಿ. ಈ ಸರ್ವಧಾರಿಯನ್ನ ಅಧಿಕಾರಿಯನ್ನ ಕೆಳಗಡೆ ಇಳಿಸಬೇಕು, ಕೋವಿಶಿಲ್ಡ್ ವಾಕ್ಸಿನ್ ನಿಂದ ಸತ್ತು ಹೋಗಿದ್ದಾರೆ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)