ವಿಜಯಪುರ : ಒಂದು ಕಡೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ಬಿ.ವೈ.ವಿಜಯೆಂದ್ರ ವಿರುದ್ಧ ಕಿಡಿಕಾರಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದೆಹಲಿಗೂ ಹೋಗಿ ಬಂದಿದ್ದಾರೆ. ಇತ್ತ ಶ್ರೀರಾಮುಲು ಕೂಡ ಯಾವುದೇ ಸ್ಥಾನ ಕೊಟ್ಟರೂ ನಿಭಾಯಿಸುತ್ತೀನಿ ಅಂತಾ ತಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅನ್ನೋದನ್ನು ಹೇಳಿಕೊಂಡಿದ್ದಾರೆ. ಇದೀಗ ಬಸನಗೌಡ ಅಭಿಮಾನಿಗಳು ಕುಂಭಮೇಳದಲ್ಲಿ ವಿಶೇಷ ಪ್ರಾರ್ಥನೆ ಮಾಡಿ, ಗಮನ ಸೆಳೆದಿದ್ದಾರೆ.
ದೆಹಲಿ ಚುನಾವಣಾ ಫಲಿತಾಂಶದ ಬಗ್ಗೆ ಕೇಂದ್ರ ಸಚಿವ ವಿ.,ಸೋಮಣ್ಣ ಪ್ರತಿಕ್ರಿಯೆ
ಪ್ರಯಾಗ್ ರಾಜ್ ನ ಗಂಗಾ ನದಿಯಲ್ಲಿ ವಿಶೇಷ ಪ್ರಾರ್ಥನೆ ಮಾಡಿದ್ದು, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪೋಟೋ ಹಿಡಿದು ಪ್ರಾರ್ಥನೆ ಮಾಡಿದ್ದಾರೆ. ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಆಗಲೆಂದು ಪೂಜೆ ಸಲ್ಲಿಸಿದ್ದಾರೆ. ಹಾಗೇ ಮುಂದೆ ಮುಖ್ಯಮಂತ್ರಿ ಕೂಡಾ ಬಸನಗೌಡ ಪಾಟೀಲ ಯತ್ನಾಳ ಆಗಬೇಕು ಅಂತಾ ಶಾಸಕ ಯತ್ನಾಳ ಪೊಟೋ ಹಿಡಿದು ಗಂಗಾನದಲ್ಲಿ ಸ್ಥಾನ ಮಾಡಿದ್ದಾರೆ.. ಬಿಜೆಪಿ ವಿಜಯಪುರ ನಗರ ಮಂಡಲ ಉಪಾಧ್ಯಕ್ಷ ನಂದು ಗಡಗಿ ಹಾಗೂ ಇತರರು ಕುಂಭಮೇಳದಲ್ಲಿ ವಿಶೇಷ ಪ್ರಾರ್ಥನೆ ಮಾಡಿದ್ದಾರೆ.