ರಾಯಚೂರು:- ಜಿಲ್ಲೆಯ ಸಿಂಧನೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಹಂಪನಗೌಡ ಬಾದರ್ಲಿ ಗೆಸ್ಟ್ ಹೌಸ್ ನಲ್ಲಿ ಕಳ್ಳರು ಕಳ್ಳತನಕ್ಕೆ ಯತ್ನಿಸಿದ ಘಟನೆ ಜರುಗಿದೆ.
ಶಾಸಕರ ಗೆಸ್ಟ್ ಹೌಸ್ ನಲ್ಲಿ ಏನು ಸಿಗದ ಹಿನ್ನೆಲೆ ಬರಿಗೈಲಿ ಕಳ್ಳರು ವಾಪಸ್ ಹೋಗಿದ್ದಾರೆ. ರಾಯಚೂರು ನಗರದ ಹೊರ ಭಾಗದ ಕೃಷ್ಣ ಮೆಡೋಸ್ ನಲ್ಲಿರೊ ನಿವಾಸದಲ್ಲಿ ಕೃತ್ಯ ನಡೆದಿದೆ. ರಾಯಚೂರು ನಗರದ ಗೆಸ್ಟ್ ಹೌಸ್ ಗೆ ಆಗಾಗ ಶಾಸಕ ಹಂಪನಗೌಡ ಬಾದರ್ಲಿ ಬರ್ತಿದ್ದರು. ಇದೇ ಸೋಮವಾರ ತಡರಾತ್ರಿ ಶಾಸಕರ ಗೆಸ್ಟ್ ಹೌಸ್ ನಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿದೆ. ರಾಡ್ ನಿಂದ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಲಾಗಿದ್ದು, ಮನೆಯಲ್ಲಿ ಏನು ಸಿಗದ ಹಿನ್ನೆಲೆ ಬರಿಗೈಲಿ ಕಳ್ಳರು ವಾಪಸ್ ಹೋಗಿದ್ದಾರೆ.
ರಾಯಚೂರು ನಗರದ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.