Kalaburgi: ನೀರಿನ ರಭಸಕ್ಕೆ ಕೊಚ್ಚಿ ಹೋಯ್ತು ತಡೆಗೋಡೆ! VIDEO VIRAL!

 ಕಲಬುರಗಿ: ನೀರಿನ ಒತ್ತಡಕ್ಕೆ ಕಲ್ಲು ಗಣಿಯ ತಡೆಗೋಡೆ ಒಡೆದು ಹೋದ ಘಟನೆ ಕಲಬುರಗಿಯಲ್ಲಿ ನಡೆದಿದೆ.ಚಿಂಚೋಳಿ ತಾಲೂಕಿನ ಮಲಕಾಪುರದಲ್ಲಿ ಘಟನೆ ನಡೆದಿದ್ದು ಭಾರಿ ಅನಾಹುತ ತಪ್ಪಿದಂತಾಗಿದೆ. ವ್ಯಾಪಕ ಮಳೆ ಹಿನ್ನೆಲೆ ಕಲ್ಲು ಗಣಿ ತಗ್ಗು ಪ್ರದೇಶ ನೀರಿನಿಂದ ತುಂಬಿತ್ತು. ಹೀಗಾಗಿ ನೀರಿನ ಒತ್ತಡ ಹೆಚ್ಚಾದ ಹಿನ್ನಲೆ ಬೃಹತ್ ಕಲ್ಲಿನ ತಡೆಗೋಡೆ ಏಕಾಎಕಿ ಕುಸಿದಿದೆ.. ಕಲ್ಲುಗಣಿಯಲ್ಲಿ ಬ್ಲಾಕ್‌ಗಳನ್ನ ನಿರ್ಮಿಸಿ ನೀರು ಸಂಗ್ರಹಣೆ ಮಾಡಲಾಗಿತ್ತು. ಆದ್ರೆ ನೀರಿನ ಒತ್ತಡ ಹೆಚ್ಚಾದ ಹಿನ್ನಲೆ ತಡೆಗಡೆ ಒಡೆದು ಅಪಾರ ಪ್ರಮಾಣದ ನೀರು ಹರಿದಿದೆ…