ನೆಲಮಂಗಲ: :-ಆತ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪ್ರಭಾವಿ ಬಿಜೆಪಿ ಮುಖಂಡ.. ವಿಶ್ವನಾಥ್ ಹಾಗೂ ಸುಧಾಕರ್ ನಡುವಿನ ಮುನಿಸು ತಣಿಸುವಲ್ಲಿ ಯಶಸ್ವಿಯಾಗಿದ್ದ ನಾಯಕ.. ಬಿಜೆಪಿಯಲ್ಲಿ ಗೇಮ್ ಮೇಕರ್ ಆಗಿದ್ದ ಆತನ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಕೋಟಿ ಕೋಟಿ ಹಣ ಸೀಜ್ ಮಾಡಿದ್ದಾರೆ.
Lokasabha Election: ಲೋಕಾ ಮತದಾನ… ಆನೇಕಲ್ ನಲ್ಲಿ ಹಕ್ಕು ಚಲಾಯಿಸುತ್ತಿರುವ ಮತದಾರರು!
ಬೃಹತ್ ಬಂಗಲೆ, ಬಂಗಲೇ ಸುತ್ತ ನಿಂತಿರುವ ಸರ್ಕಾರಿ ಕಾರುಗಳು, ಹಣ ಎಣಿಸುವ ಮೆಷಿನ್, ಚಿನ್ನ ಹಳೆಯುವ ಮೆಷನ್ ತೆಗೆದುಕೊಂಡು ಹೊಗುತ್ತಿರುವ ಅಧಿಕಾರಿಗಳು, ಆ ಮನೆಯ ಮಾಲೀಕ ಬೆಳಗ್ಗೆ ಎದ್ದು ಕಣ್ಣು ಬಿಟ್ಟಾಕ್ಷಣ ಕಂಡದ್ದು ಐಟಿ ಅಧಿಕಾರಿಗಳ ಗುಂಪು, ಇಲ್ಲಿ ಆಧಾಯ ತೆರಿಗೆ ಇಲಾಖಾ ಅಧಿಕಾರಿಗಳು ದೊಡ್ಡ ತಿಮಿಂಗಿಲವೊಂದರ ಭೇಟೆ ಆಡಲು ಬಂದು ಒಳ್ಳೆ ಭೇಟೆ ಆಡಿ ಸುಮಾರು 4 ಕೋಟಿ 80ಲಕ್ಷ ನಗದು ಸೇರಿದಂತೆ ಚಿನ್ನಾಭರಣ ವಶಕ್ಕೆ ಪಡೆದು ತೆರಳಿದ್ದಾರೆ
2ಹೌದು ಉತ್ತರ ವಲಯ ಚುನಾವಣಾ ವೀಕ್ಷಕರಾದ ಮೌನೇಶ್ ಮೌದ್ಗಿಲ್ ಹೇಳೋ ಪ್ರಕಾರ ಇವರಿಗಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಈ ಹಿಂದೆ ಮೌನೇಶ್ ಮೌದ್ಗಿಲ್ ಅವರು ಬಿಡಿಎ ಆಯುಕ್ತರಾಗಿದ್ದರಿಂದ ಈ ದಾಳಿ ಕೆಲವು ರಾಜಕೀಯ ಆಯಾಮಗಳಿಗೆ ತಿರುವು ಪಡೆದುಕೊಳ್ಳುತ್ತಿದೆ..
ಸದ್ಯ ಐಟಿ ಅಧಿಕಾರಿಗಳ 12 ಗಂಟೆಗಳ ನಿರಂತರ ದಾಳಿ ಮುಂದುವರೆದಿದ್ದು, ಮೇಲ್ನೋಟಕ್ಕೆ ಇದು ಚುನಾವಣೆಗೆ ಹಂಚಲು ತಂದಿದ್ದ ಹಣ ಇರಬಹುದು ಎಂದಿ ತಿಳಿದು ಬಂದಿದು, ದಾಖಲೆ ತಂದು ಸಲ್ಲಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ..