ಬೆಂಗಳೂರು:– ನಗರದಲ್ಲಿ ಅಸಮರ್ಪಕ ಘನ ತ್ಯಾಜ್ಯ ವಿಲೇವಾರಿ ಹಿನ್ನೆಲೆ ಸ್ಥಳಕ್ಕೆ ಲೋಕಾಯುಕ್ತ ನ್ಯಾಯಮೂರ್ತಿಗಳು ಭೇಟಿ ಮಾಡಿ ಪರಿಶೀಲನೆ ಮಾಡಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಹಲವೆಡೆ ಪರಿಶೀಲನೆ ಹಮ್ಮಿಕೊಂಡ ನ್ಯಾಯಮೂರ್ತಿಗಳು, ಕಮ್ಮಗೊಂಡನಹಳ್ಳಿ, ಅಬ್ಬಿಗೆರೆ ಹಾಗೂ ಚಿಕ್ಕಬಾಣಾವಾರ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಲೋಕಾಯುಕ್ತ ಮುಖ್ಯ
ನ್ಯಾ.ಬಿ ಎಸ್ ಪಾಟೀಲ್, ಉಪ ಲೋಕಾಯುಕ್ತರಾದ ನ್ಯಾ. ಕೆ ಎನ್ ಫಣೀಂದ್ರ ಹಾಗೂ ನ್ಯಾ. ಬಿ. ವೀರಪ್ಪ ಅವರಿಂದ ಪರಿಶೀಲನೆ ನಡೆದಿದೆ. ತ್ಯಾಜ್ಯ ವಿಲೇವಾರಿ ಹಾಗೂ ವಿಲೇವಾರಿ ಅಕ್ರಮಗಳ ಬಗ್ಗೆ ಸಾರ್ವಜನಿಕರ ದೂರು ನೀಡಲಾಗಿತ್ತು.
ಲೋಕಾಯುಕ್ತಕ್ಕೆ ಸಾರ್ವಜನಿಕರಿಂದ ದೂರುಗಳು ಹಿನ್ನೆಲೆ ಇಂದು ಮಧ್ಯಾಹ್ನ ಮೂರು ಗಂಟೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಸಮರ್ಪಕ ತ್ಯಾಜ್ಯ ವಿಲೇವಾರಿ ಬಗ್ಗೆ ಲೋಕಾಯುಕ್ತ ಸುಮೋಟೊ ಪ್ರಕರಣ ದಾಖಲಿಸಿದ್ದು, ಈ ಬಗ್ಗೆ ತನಿಖೆ ನಡೆಸಿ ಅಕ್ರಮಗಳ ಬಗ್ಗೆ ಲೋಕಾಯುಕ್ತ ಪರಿಶೀಲನೆಗೆ ಮುಂದಾಗಿದೆ.
ಇಂದು ನ್ಯಾಯಮೂರ್ತಿಗಳಿಂದ ಅಯ್ದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಚಿಕ್ಕಬಾಣಾವಾರ ಪುರಸಭೆ ಅಧಿಕಾರಿ ಕುಮಾರ್ ಗೆ ಲೋಕಾಯುಕ್ತ ನ್ಯಾಯಮೂರ್ತಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ.