ತುಮಕೂರು:– ಡೂಪ್ಲಿಕೇಟ್ ಆದ್ರೆ ನಿಮ್ಮ ಕಾರ್ಯಕರ್ತರು ಗ್ಯಾರಂಟಿ ಬೇಡ ಎಂದು ಬರೆದುಕೊಡಲಿ ಎಂದು DCM ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಗ್ಯಾರಂಟಿಗಳು ಡೂಪ್ಲಿಕೇಟ್ ಅಂತ ಹೇಳುವುದಾದರೆ ನಿಮ್ಮ ಕಾರ್ಯಕರ್ತರು ನಮಗೆ ಗ್ಯಾರಂಟಿ ಬೇಡ ಅಂತ ಬರೆದು ಕೊಡುತ್ತಾರೆ ಎಂದು ಅಶೋಕ್ ಗೆ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಮಾಧುಸ್ವಾಮಿ ಅವರಿಗೆ ಹೇಳ ಬಯಸುತ್ತೇನೆ. ಈ ಯೋಜನೆ ತಪ್ಪಿಸಲು ಸಾಧ್ಯವಾಗಲಿಲ್ಲ. ಬಿಜೆಪಿ, ಜನತಾದಳ ವೋಟ್ ಕೇಳಲು ಬಂದಾಗ ಡಿಕೆ ಶಿವಕುಮಾರ್ ಈ ಸಮಾಜದ ಕೆಲಸ ಮಾಡಿದ್ದಾರಾ ಅಂತ ಕೇಳಬೇಕು. ಕಾಂಗ್ರೆಸ್, ಬಿಜೆಪಿ ಮತ್ತು ಜನತಾದಳದ ವಿರುದ್ದ ಹೋರಾಟ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ಆತ್ಮ ವಿಶ್ವಾಸದಿಂದ ಇಲ್ಲಿಗೆ ಬಂದಿದ್ದೇನೆ. ಕಾವೇರಿ ನೀರು ನಿಮ್ಮೂರಿಗೆ ಇಡೀ ಕ್ಷೇತ್ರದ ತುಂಬ ಹರಿಯಲು 1 ಸಾವಿರ ಕೋಟಿ ರೂ. ಮಂಜೂರು ಮಾಡಿದ್ದೇವೆ. ಯಡಿಯೂರಪ್ಪ, ಮಾಧುಸ್ವಾಮಿ, ಕುಮಾರಸ್ವಾಮಿಗೆ ಹೇಳಲು ಬಯಸುತ್ತೇನೆ. ಲಿಂಕ್ ಕೆನಾಲ್ ಯೋಜನೆಯನ್ನು ಬದಲಾಯಿಸಿದ್ದರು. ನಾನು ಆಗಾಗ ಹೇಳುತ್ತಿದ್ದೆ ನಾವು ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕು.
ಬಡತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಕುಮಾರಸ್ವಾಮಿ ತೆನೆಹೊತ್ತ ಮಹಿಳೆ ಬಿಸಾಕಿ ಕಮಲ ಹಿಡಿದುಕೊಂಡರು. ಕೆರೆಯಲ್ಲಿ ಕಮಲ ಇರಬೇಕು. ಹೊಲದಲ್ಲಿ ತೆನೆ ಇರಬೇಕು. ಅರಳಿದ ಕಮಲ ಉದುರಿ ಹೊಯ್ತು. ತೆನೆ ಹೊತ್ತ ಮಹಿಳೆ ಬಿಸಾಕಿ ಹೊದರು. ಹಸ್ತ ದಾರಿಯಲ್ಲಿ ನಿಂತು ದಾನ ಮಾಡುತ್ತಿದೆ ಎಂದು ಹೇಳಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)