ಹುಬ್ಬಳ್ಳಿ; ಈ ಹಿಂದೆ 2018 ರಲ್ಲಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನ ಸಭೆ ಚುನಾವಣಾ ನಡೆತು ಆವಾಗ
ಎಷ್ಟೇ ಗುದ್ದಾಡಿದರು ಕೊನೆಗೆ ಬಂದು ನಿಂತಿದ್ದು 104ಕ್ಕೆ ಇವತ್ತು ಬಿಜೆಪಿ ಹದಗೆಟ್ಟು ಹೋಗಿದೆ ಈಗ ಚುನಾವಣಾ ನಡೆದ್ರೆ 66 ಅಲ್ಲಾ 40 ಸೀಟ್ ಸಹ ಬಿಜೆಗೆ ಬರೋದಿಲ್ಲ ಬಿಜೆಪಿ ರಿಪೇರಿ ಮಾಡಲಾಗದಷ್ಟು ಹದಗೆಟ್ಟಿದೆ ವಿಜಯೇಂದ್ರ ಅಲ್ಲಾ ಯಾರು ಅಧ್ಯಕ್ಷರು ಆದ್ರು ಅದನ್ನು ಸರಿ ಮಾಡಲು ಆಗುವುದಿಲ್ಲ ಎಂದರು. ಇನ್ನುಐದು ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಒಳ್ಳೆಯ ಫಲಿತಾಂಶ ಬರುತ್ತೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು ಮಧ್ಯಪ್ರದೇಶ, ಛತ್ತೀಸ್ ಘಡ ಎರಡರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ತೆಲಂಗಾಣದ ಅಧಿಕಾರಕ್ಕೆ ಬರುವ ಎಲ್ಲಾ ಅವಕಾಶಗಳಿವೆ ರಾಜಸ್ಥಾನದಲ್ಲಿ ನೆಕ್ ಟು ನೆಕ್ ಫೈಟ್ ಇದೆ ಆದರೆ ಅತೀವ ವಿಜಯ ಕಾಂಗ್ರೆಸ್ ಬರುತ್ತದೆಜನರ ಭಾವನೆ ಯಾವರೀತಿ ಇದೆ ಎನ್ನುವುದನ್ನು ಈ ಚುನಾವಣಾ ಫಲಿತಾಂಶ ತಿಳಿಸುತ್ತದೆ ಎಂದರು. ಯಾವುದೇ ರಾಜಕೀಯ ಪಕ್ಷಗಳು ಕೊನೆಯ ಹಂತದವರಿಗೆ ಅಭ್ಯರ್ಥಿಗಳ ಆಯ್ಕೆ ಪಟ್ಟಿ ತೆಗೆದುಕೊಂಡು ಹೋಗಬಾರದು
ಎಷ್ಟೋ ಬೇಗ ಸಾಧ್ಯವೋ ಅಷಯ ಬೇಗ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬೇಕು ಇದರಿಂದಾಗಿ ಅಭ್ಯರ್ಥಿಗಳು ಅತೀ ಹೆಚ್ಚು ಜನರನ್ನು ತಲುಪಬಹುದು ಇದು ಎಲ್ಲಾ ರಾಜಕೀಯ ಪಕ್ಷಗಳಿಗೆ ಒಳ್ಳೆಯದು ಎಂದರು.
ಕಾನೂನಿನಲ್ಲಿ ಪ್ರಕರಣ ವಾಪಸು ಪಡೆಯಲು ಅವಕಾಶಯಿದೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಮೇಲಿನ ಪ್ರಕರಣ ವಾಪಾಸ್ ಪಡೆದ ಕುರಿತು ಸಹ ಮಾತನಾಡಿದ ಅವರು ಈ ಹಿಂದಿನ ಸರ್ಕಾರ ಹರಿಬರಿಯಲ್ಲಿ ಸಿಬಿಐ ತನಿಖೆ ಪ್ರಕರಣ ನೀಡಿತ್ತು ಅದನ್ನು ಇವತ್ತು ವಾಪಸು ಪಡೆಯಲಾಗಿದ್ದು, ಕಾನೂನಿನಲ್ಲಿ ಪ್ರಕರಣ ವಾಪಸು ಪಡೆಯಲು ಅವಕಾಶಯಿದೆಹೀಗಾಗಿ ಕಾಂಗ್ರೆಸ್ ಸರ್ಕಾರ ವಾಪಸು ಪಡೆದಿದೆಈ ಹಿಂದಿನ ಸರ್ಕಾರ ಸರಿಯಾಗಿ ಕಾನೂನಾತ್ಮಕವಾಗಿ ಪ್ರಕರಣ ನೀಡಿದ್ದ್ರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ, ಡಿಕೆ ಶಿವಕುಮಾರ್ ವಿಚಾರದಲ್ಲಿ ಕಾನೂನು ಬದ್ಧತೆಯಿದೆ ಇದಕ್ಕೆ ಬಿಜೆಪಿ ಬೆರಳು ಮಾಡಬಾರದು ಎಂದ ಅವರು ಇಂದು ಎಲ್ಲವೂ ರಾಜಕೀಯವಾಗಿದೆ ಸಿಬಿಐ ಐಟಿ, ಇಡಿ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ.
ಈ ರೀತಿಯ ಸಂಸ್ಥೆಗಳ ಬಗ್ಗೆ ಜನರಿಗೆ ಹೆದರಿಕೆ ಇತ್ತು ಆದರೆ ಈಗ ಸಿಬಿಐ ಅಂದ್ರೂ ಹೆದರಿಕೆ ಇಲ್ಲ, ಐಟಿ ಅಂದ್ರೂ ಹೆದರಿಕೆ ಇಲ್ಲ ಇದೆಲ್ಲಾ ನಾಟಕೀಯ ಅಂತ ಜನ ಆಲೋಚನೆ ಮಾಡುತ್ತಿದ್ದಾರೆ.. ಇಷ್ಟು ದಿನ ಐಟಿ ಮತ್ತು ಈಡಿ ದಾಳಿ ಮಾಹಿತಿ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಲಿದಾಳಿ ಬಗ್ಗೆ ಶ್ವೇತ ಪತ್ರ ಬಿಡುಗಡೆ ಮಾಡಲಿ ಹುಬ್ಬಳ್ಳಿ ಧಾರವಾಡದಲ್ಲಿ ಯಾರು ಪ್ರಬಲವಾಗಿ ರಾಜಕೀಯ ಪ್ರಚಾರದಲ್ಲಿ ಭಾಗವಹಿಸುತ್ತಾರೆ ಅಂತಹವರ ಮೇಲೆ ಐಟಿ ದಾಳಿಯಾಗಿದೆನನ್ನ ಆಪ್ತರ ಮೇಲೆ, ಬೆಂಬಲಿಗರಿಗೆ ಐಟಿ ದಾಳಿ ಬೆದರಿಕೆ ಹಾಕಿ ನಮ್ಮ ಮನೆ ಹತ್ತಿರ ಬಾರದಂತೆ ತಡೆಯಲಾಗಿದೆ. ಇನ್ನು ಜಗದೀಶ್ ಶೆಟ್ಟರ್ ಎಲ್ಲಾ ಚುನಾವಣೆಯಲ್ಲಿ ಕಾಯಂ ಟಾರ್ಗೆಟ್ ಆದರೆ ನಾನು ಯಾವುದಕ್ಕೂ ಹೆದರುವುದಿಲ್ಲ ನನ್ನ ಮೇಲೆ ಐಟಿ ದಾಳಿ ನೆಡಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.