ಮಂಡ್ಯ: ನಾನೊಬ್ಬ ಸ್ವಾಭಿಮಾನಿ ರಾಜಕಾರಣಿ, ಸ್ವಾರ್ಥ ರಾಜಕಾರಣಿ ಅಲ್ಲ. ಸ್ವತಃ ನಿರ್ಧಾರ ಕೈಗೊಂಡು ಚುನಾವಣಾ ರಾಜಕೀಯಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಪಕ್ಷಕ್ಕಾಗಿ ಕೊನೆಯವರೆಗೂ ದುಡಿಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಡಿವಿ ಸದಾನಂದ ಗೌಡ ತಿಳಿಸಿದರು.
ಮಂಡ್ಯದ ದೊಡ್ಡಬ್ಯಾಡರಹಳ್ಳಿಯಲ್ಲಿ ಮಾತನಾಡಿದ ಡಿವಿ ಸದಾನಂದ ಗೌಡ ಅವರು, ” ಸಾಯುವವರೆಗೂ, ಹೆಣದ ಮೇಲೆ ಫ್ಲಾಗ್ ಹಾಕುವವರಗೂ ರಾಜಕಾರಣದಲ್ಲಿರಬೇಕು ಅನ್ನುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ನಾನು ಅಷ್ಟು ಸ್ವಾರ್ಥಿಯಲ್ಲ. ಹೀಗಾಗಿ, ಚುನಾವಣೆಯಿಂದ ದೂರ ಉಳಿಯುತ್ತಿದ್ದೇನೆ ” ಎಂದಿದರು.
ಮಂಡಿ ನೋವು, ಸಂದಿ ನೋವುಗಳಿಂದ ಜೀವನದಲ್ಲಿ ಬೇಸತ್ತಿದ್ದರೆ ಇದೊಂದು ಚಿಕಿತ್ಸೆ ಪ್ರಯತ್ನ ಮಾಡಿ: ಉಚಿತ ಸಲಹೆ
ಪಕ್ಷ ಸೂಚನೆ ಮೇರೆಗೆ ಡಿವಿ ಸದಾನಂದ ಗೌಡರು ನಿವೃತ್ತಿ ಎಂದು ಬಿಎಸ್ ಯಡಿಯೂರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ” ರಾಷ್ಟ್ರೀಯ ನಾಯಕರು ಸುಪ್ರೀಂ. ನನಗೆ ಕೇಂದ್ರದ ಯಾವುದೇ ನಾಯಕರ ಒತ್ತಡ ಇಲ್ಲ. ನಾನು ನನ್ನ ರಾಜಕೀಯ ಜೀವನದಲ್ಲಿ ಒತ್ತಡದ ರಾಜಕಾರಣ ಮಾಡಿದವನಲ್ಲ. ಯಾರೇ ದೊಡ್ಡವರಿದ್ದರು, ನ್ಯಾಷನಲ್ ಪ್ರೆಸಿಡೆಂಟ್ ಇರಲಿ ನನಗೆ ಒತ್ತಡ ಇಲ್ಲ ” ಎಂದು ಹೇಳಿದರು.