ಹೊಸಕೋಟೆ ತಾಲೂಕಿನಾದ್ಯಂತ ಭಾರೀ ಮಳೆ…! ವಾಹನ ಸವಾರರು ಪರದಾಟ!

ದೇವನಹಳ್ಳಿ:– ಹೊಸಕೋಟೆ ತಾಲೂಕಿನಾದ್ಯಂತ ಸಂಜೆ ನಾಲ್ಕು ಗಂಟೆ ವೇಳೆಗೆ ಭಾರಿ ಮಳೆ ಸುರಿದಿದೆ. ಎರಡು ಗಂಟೆಗಳಿಂದ ಮಳೆ ಸುರಿದಿದ್ದು, ಬೆಳಗ್ಗೆಯಿಂದ ನಿರಂತರವಾಗಿ ತುಂತುರು ಮಳೆ ಸುರಿಯುತ್ತಿದೆ. ಸಂಜೆ ನಾಲ್ಕು ಗಂಟೆ ನಂತರ‌ ಮಳೆರಾಯನ ಆರ್ಭಟ ಜೋರಾಗಿದೆ. ಮಳೆಯಿಂದ ವಾಹನ ಸವಾರರು ಪರದಾಟ ನಡೆಸಿದ್ದಾರೆ. Breaking: ಹಸು ಮೇಯಿಸಲು ಹೋದ ವೇಳೆ ಸಿಡಿಲು ಬಡಿದು ವ್ಯಕ್ತಿ ಸಾವು! ಮಳೆಯ ರುದ್ರನರ್ತನಕ್ಕೆ ಮನೆಗಳಿಂದ ಜನ ಹೊರಬಂದಿಲ್ಲ. ಅಂತು ಬೆಂಗಳೂರು ಗ್ರಾಮಾಂತರ ‌ಪ್ರದೇಶಗಳಲ್ಲಿ ವರುಣ ತಂಪೆರೆದಿದ್ದಾನೆ.