ರಾಮನಗರ: ಬಿಡದಿ ಭಾಗದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗ ಮಾಡುತ್ತಿದ್ದಾರೆ. ಅವರ ಓಡಾಟಕ್ಕೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಬಿಡದಿಗೆ ಮೆಟ್ರೋ ಘೋಷಣೆ ಮಾಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೆ ಬಿಡದಿ ಸ್ಮಾರ್ಟ್ ಸಿಟಿಗಾಗಿ ಹತ್ತು ಸಾವಿರ ಎಕರೆ ಜಾಗ ವಶ ಪಡಿಸಿಕೊಳ್ಳಲಾಗಿತ್ತು. ಅದು ಹಾಗೇಯೆ ಉಳಿದುಕೊಂಡಿದೆ.
ಹೀಗಾಗಿ ಗ್ರೇಟರ್ ಬೆಂಗಳೂರು ಡೆವಲಪ್ಮೆಂಟ್ ಪ್ಲ್ಯಾನಿಂಗ್ ಅಥಾರಿಟಿಯನ್ನಾಗಿ ಬಿಡದಿಯನ್ನು ಘೋಷಿಸಲಾಗಿದೆ ಎಂದರು. ಎಲ್ಲರಿಗು ಶಕ್ತಿ ತುಂಬುವ ದೃಷ್ಟಿಯಿಂದ ಈ ಘೋಷಣೆಗಳನ್ನು ಮಾಡಲಾಗುತ್ತಿದೆ. ಸ್ಥಳೀಯರಿಗೆ ಉದ್ಯೋಗಕ್ಕಾಗಿ ಪ್ರತ್ಯೇಕ ಸಭೆ ನಡೆಸಿ, ಎಲ್ಲ ಕಾರ್ಖಾನೆಗಳ ಬಳಿ ಮನವಿ ಮಾಡಲಾಗುವುದು. ನಾವೆಲ್ಲ ಬೆಂಗಳೂರಿನವರು. ನಮ್ಮ ಮೂಲ ಹೆಸರನ್ನು ನಾವು ಕೆಳದುಕೊಳ್ಳುವುದಿಲ್ಲ. ಹೀಗಾಗಿ ಬೆಂಗಳೂರು ದಕ್ಷಿಣವನ್ನಾಗಿ ಜಿಲ್ಲೆಯ ಹೆಸರು ಬದಲಿಸಲು ಜನರಿಂದ ಅಭಿಪ್ರಾಯ ಕೇಳಲಾಗುತ್ತಿದೆ.
![Demo](https://ainlivenews.com/wp-content/uploads/2023/12/spoorthi-1.jpg)
ಬಳಿಕ ಸರಕಾರದ ಮುಂದಿಟ್ಟು ಬದಲಾವಣೆ ಕ್ರಮ ಕೈಗೊಳ್ಳಲಾಗುವುದು. ಸಿಬಿಐ ಅರ್ಜಿ ವಜಾ ಆಗಿದ್ಯಾ? ನನಗೆ ಗೊತ್ತಿಲ್ಲ. ಏಕೆ? ಈಗ ಇಲ್ಲಿದ್ದೆನೆ. ವಿಚಾರಿಸಿ ಮಾತನಾಡುತ್ತೆನೆ ಎಂದು ಹೈಕೋರ್ಟ್ ನಲ್ಲಿ ಅರ್ಜಿ ವಜಾಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದರು. ನೈಸ್ ರಸ್ತೆ ವಿವಾದದ ಬಗ್ಗೆ ಹೆಚ್ಚಾಗಿ ಪ್ರತಿಕ್ರಿಸದ ಉಪ ಮುಖ್ಯಮಂತ್ರಿಗಳು ಮಾತನಾಡುವ , ಚರ್ಚೆ ಮಾಡೊಣ ಎಂದರು.
ಇನ್ನೂ ಟಯೋಟವನ್ನು ಸಾತನೂರಿನಲ್ಲಿ ಮಾಡಬೇಕು ಎಂಬ ಚಿಂತನೆ ಇತ್ತು. ಅಲ್ಲಿನ ರೈತರ ಗಲಾಟೆಯಿಂದಾಗಿ ಬಿಡದಿಯಲ್ಲಿ ಟಯೋಟ ನಿರ್ಮಾಣಗೊಂಡಿತ್ತು. ಆಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿತ್ತು. ಆ ಕಾಲದಲ್ಲಿ ಎಕರೆಗೆ ೬ ಲಕ್ಷದಂತೆ ರೈತರನ್ನು ಒಪ್ಪಿಸಿದ್ದೆ. ಡಿಸಿ ಕಚೇರಿಯಲ್ಲಿ ರೈತರ ಬಳಿ ಮಾತನಾಡಿದ್ದೆ. ನನ್ನದು ಹತ್ತು ಎಕರೆ ಜಮೀನಿತ್ತು. ಸ್ಥಳೀಯರಿಗೆ ಮೊದಲು ಇಲ್ಲಿ ಕೆಲಸ ನೀಡಲಾಗುತ್ತಿತು. ಆಗ ಯೂನಿಯನ್ ಕಟ್ಟಿ ಗಲಾಟೆ ಮಾಡಿದ್ದರು ಎಂದು ಈ ವೇಳೆ ಮೆಲಕು ಹಾಕಿದರು. ನನ್ನ ಬಳಿಯು ಟಯೋಟ ಕಾರಿದೆ. ಮೊದಲ ಇನೋವಾ ಕಾರನ್ನು ಕಂಪನಿ ನನಗೆ ನೀಡಿತ್ತು. ಎಂಪಿ ಅವರು ಫಾರ್ಚುನರ್ ಕಾರು ಇಟ್ಟಿಕೊಂಡಿದ್ದಾರೆ ಎಂದರು.
![](https://ainlivenews.com/wp-content/uploads/2024/01/Ad-Banner-copy-scaled.jpg)