ಬೆಂಗಳೂರು: ತಾನು ಮಾಡಿದ್ದೇ ಕಾನೂನು , ಹೇಳಿದ್ದೇ ಲಾಸ್ಟ್ ಅಂತ್ತಿದ್ದ ಆರ್ ಆರ್ ನಗರದದ ಶಾಸಕನಿಗೆ ಎಸ್ ಐ ಟಿ ಅಧಿಕಾರಿಗಳು ಶಾಕ್ ಮೇಲೆ ಶಾಕ್ ಕೊಟ್ಟಿದ್ದಾರೆ. ಶಾಸಕ ಮುನಿರತ್ನ ಗೆ ನಿನ್ನೆಯಿಂದ ಒಂದು ಲೆಕ್ಕ,ಇಂದಿನಿಂದ ಮತ್ತೊಂದು ಲೆಕ್ಕ. ಹನಿಟ್ರಾಪ್ ಎಂ ಎಲ್ ಎ ಗೆ ಸಂಕಷ್ಟ ಶುರುವಾಗಿದೆ. ಅತ್ಯಾಚಾರ , ಕೊಲೆ ಬೆದರಿಕೆ, ಜಾತಿ ನಿಂಧನೆ ಕೇಸ್ ಗಳ ತನಿಖೆ ಶುರುಮಾಡಿರುವ ಎಸ್ ಐ ಟಿ ಅಧಿಕಾರಿಗಳು ನಿನ್ನೆ ಮತ್ತಷ್ಟು ಚುರುಕು ಮುಟ್ಟಿಸಿದ್ರು ,
ಶಾಸಕ ಮುನಿರತ್ನ ಮನೆ ,ಗೋದಾಮು , ಕಚೇರಿ ಸೇರಿದಂತೆ ಹಲವು ಕಡೆ ತನಿಖೆ ನಡೆಸಿ ,ಪರಿಶೀಲನೆ ನಡೆಸಿದ್ರು ಅಲ್ಲದೆ ಮನೆಯಲ್ಲಿ ಕೆಲವು ಸಿಡಿ, ಪೆನ್ ಡ್ರೈ , ಸೇರಿದಂತೆ ಹಲವು ಮಹತ್ವದ ದಾಖಲೆಗಳ ನ್ನ ವಶಕ್ಕೆ ಪಡೆದು ಕೊಂಡು ತನಿಖೆ ಶುರುಮಾಡಿದ್ದಾರೆ.
Mysore Dasara 2024: ಮೈಸೂರು ದಸರಾ ಮಹೋತ್ಸವದ ವೇಳಾಪಟ್ಟಿ ಬಿಡುಗಡೆ: ಜಂಬೂಸವಾರಿ ಯಾವಾಗ ಗೊತ್ತಾ..?
ಇನ್ನೂ ಶಾಸಕ ಮುನಿರತ್ನ ಪ್ರಕರಣ ವನ್ನು ಬಯಲಿಗೆ ತಂದಿದ್ದು ಕಾಂಗ್ರೆಸ್ಸೇ ಹೊರೆತು ಬಿಜೆಪಿಯಲ್ಲ ,ಮುಂದಿನ ದಿನಗಳಲ್ಲಿ ಬಿಜೆಪಿಗೂ ಕೂಡ ಮುನಿರತ್ನ ಪ್ರಕರಣ ಸಂಕಷ್ಟ ತಂದು ಹೊಡ್ಡುತ್ತೇ . ಸಿಟಿ ರವಿ ಅಶೋಕ್, ಅವರಿಗೂ ಕೂಡ ದೊಡ್ಡ ಮುಜುಗರ ತರುತ್ತೇ ಎಂದು ಮಂಡ್ಯದಲ್ಲಿ ಸಚಿವ ಚೆಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಮುನಿರತ್ನ ಮಾಡಿರುವ ಕೃತ್ಯಗಳ ಬಗ್ಗೆ ಎಸ್ ಐ ಟಿ ಅಧಿಕಾರಿಗಳ ತನಿಖೆ ಜೋರಾಗಿದೆ , ಎಫ್ ಎಸ್ ಎಲ್ ವರದಿ ಬಂದ ನಂತರ ಮತ್ತಷ್ಟು ಕಾನೂನು ಸಂಕಷ್ಟ ಎದುರಿಸಬೇಕಾಗುತ್ತದೆ..ಮುಂದೆ ಅವರ ರಾಜಕೀಯ ಜೀವನ ಏನಾಗುತ್ತೋ ಅನ್ನೋ ಆತಂಕ ಕೂಡ ಮುನಿರತ್ನ ಅವರನ್ನ ಕಾಡುತ್ತಿದೆಯಂತೆ..