ಹಾವೇರಿ: ನಿನ್ನೆ ನರೇಂದ್ರ ಮೋದಿಯವರು ಮೂರನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
Breaking: ನಿಷೇಧಿತ ಪೋಕರ್ ಗೇಮ್ ಅಡ್ಡೆ ಮೇಲೆ ಸಿಸಿಬಿ ದಾಳಿ..!
ನೆಚ್ಚಿನ ನಾಯಕ ಮತ್ತೊಮ್ಮೆ ಪ್ರಧಾನಿಯಾದ ಹಿನ್ನೆಲೆ ನಿನ್ನೆ ಮೋದಿ ಹೆಸರಿನ ಹೋಟೇಲ್ ಮಾಲಿಕರೊಬ್ಬರು ಗ್ರಾಹಕರಿಗೆ ಉಚಿತ ಊಟದ ವ್ಯವಸ್ಥೆಯನ್ನ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಹಲಗೇರಿ ಗ್ರಾಮದ ಮೋದಿ ಹೋಟೆಲ್ ಮಾಲೀಕ ವೀರೇಶ ಉಜ್ಜನಗೌಡ್ರು ಈ ವ್ಯವಸ್ಥೆ ಮಾಡಿದ್ದಾರೆ. ಸುಮಾರು ನಾಲ್ಕು ಸಾವಿರ ಜನರಿಗೆ ಹೋಳಿಗೆ, ರೊಟ್ಟಿ, ಅನ್ನ-ಸಂಬಾರ, ಎರಡು ತರಹದ ಪಲ್ಲೆ ಸೇರಿ ಊಟದ ವ್ಯವಸ್ಥೆ ಮಾಡಿ ಬಡಿಸಿದ್ದಾರೆ.
ಪ್ರತಿ ಭಾರಿ ಮೋದಿಯವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ದಿನದಂದು ಉಚಿತವಾಗಿ ಊಟ ಹಾಗೂ ಉಪಹಾರ ನೀಡುತ್ತ ಬಂದಿದ್ದಾರೆ. ಈ ಬಾರಿ ಬಿಜೆಪಿಗೆ ಬಹುಮತ ಬಾರದಿರುವುದು ನೋವಾಗಿದೆ. ಆದರೆ ಮೋದಿಯವರು ಎನ್ ಡಿಎ ನಲ್ಲಿ ಪ್ರಧಾನಿ ಆಗುತ್ತಿದ್ದಾರೆ ಎಂಬುದು ಸ್ವಾಗತಾರ್ಹ. ಬಿಜೆಪಿ ಬಹುಮತ ಬಂದಿದ್ದರೆ ಬೆಣ್ಣೆದೋಸೆ ಕೊಡುವ ನಿರ್ಧಾರ ಮಾಡಿದ್ರಂತೆ.
ಮೋದಿ ಹೆಸರಿನಿಂದ ಹೋಟೆಲ್ ಆರಂಭಿಸಿದ ಬಳಿಕ
ಈವರೆಗೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಹಿಂದುಗಳು ಮುಸ್ಲಿಂಮರು ಬಂದು ಊಟ ಮಾಡುತ್ತಾರೆ ಎಂದು ಹೋಟೆಲ್ ಮಾಲಿಕ ವೀರೇಶ ಉಜ್ಜನಗೌಡ್ರ ಹೇಳಿದ್ದಾರೆ.