ಹುಬ್ಬಳ್ಳಿ; ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಜಗದೀಶ ಶೆಟ್ಟರ ರವರ ಹುಟ್ಟು ಹಬ್ಬದ ಅಂಗವಾಗಿ ಇಂದು ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಭಾಭವನದಲ್ಲಿ ಕಾಂಗ್ರೆಸ್ ಸಮಿತಿಯ ಜಿಲ್ಲಾ ಕಾರ್ಯದರ್ಶಿಯಾದ ಹಟೇಲಸಾಬ (ಕಲಂದರ್) ಮುಲ್ಲಾ ನೇತೃತ್ವದಲ್ಲಿ ಉಚಿತ ಕಣ್ಣು ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು
ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಉದ್ಘಾಟನೆ ಮಾಡಿದರು.
ಮಾಜಿ ಸಂಸದ ಸನದಿ, ಮಾಜಿ ಸಚಿವರಾದ ಎ.ಎಂ. ಹಿಂಡಸಗೇರಿಯವರು, ಶಾಕೀರ ಸನದಿ , ಪಾರಸಮಲ್ ಜೈನ್,ದೊಡ್ಡಮನಿ,
ಮಲ್ಲಿಕಾರ್ಜುನ ಸಾವಕಾರ, ನಾಗೇಶ ಕಲಬುರ್ಗಿ, ಹೂವಪ್ಪ ದಾಯಗೋಡಿ, ಪಾಲಿಕೆ ಸದಸ್ಯ ಸಂದೀಲಕುಮಾರ , ಸಂಕಲ್ಪ ಶೆಟ್ಟರ , ವಿರೂಪಾಕ್ಷಪ್ಪ ರಾಯನಗೌಡ , ಸುನೀಲ್ ಮಠಪತಿ, ಅಬ್ದುಲ್ ಗಣಿ ವಲಿಅಹ್ಮದ್, ಮಕ್ತು ಜಾಲೆಗಾರ್, ಪ್ರಕಾಶ್ಜಾ ದವ್, ಶ್ರೀಮತಿ ಕಲಾವತಿ,ಭಾರತಿ ಟಪಾಲ, ನಬಿಸಾಬ್ ನದಾಫ್, ಶಂಕರ್ ವಡ್ಡಟ್ಟಿ, ಬಸವರಾಜ್ ಮ್ಯಾಗಡಿ, ಹಾಗೂ ಪಕ್ಷದ ಪ್ರಮುಖರು ಬೆಂಗೇರಿಯಲ್ಲಿರುವ ಸ್ಥಳೀಯರು ಗುರುಹಿರಿಯರು ಉಪಸ್ಥಿತರಿದ್ದರು.