ಪ್ರವಾಹ ಭೀತಿ ಹಿನ್ನಲೆ: 32 ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ

ಬಾಗಲಕೋಟೆ: ಬಾಗಲಕೋಟೆ ಜಿಲ್ಲಯಲ್ಲಿಯೂ ಪ್ರವಾಹ ಭೀತಿ ಹಿನ್ನಲೆ ಘಟಪ್ರಭಾ ತೀರದ ಹಳ್ಳಿಗಳಲ್ಲಿ ಎಲ್ಲರೂ ಜಾನುವಾರುಗಳ ಸಮೇತ ಸಾಮಾನು ಸರಂಜಾಮು ಕಟ್ಟಿಕೊಂಡು ಸುರಕ್ಷತಾ ಸ್ಥಳಗಳಿಗೆ ತೆರಳುವಂತೆ ಡಂಗುರ ಸಾರಲಾಗಿದೆ. ನದಿ ಪಾತ್ರದ ಪ್ರವಾಹಬಾಧೆಗೆ ಒಳಗಾಗುವ ಹಳ್ಳಿಗಳಲ್ಲಿ ಮುಂಜಾಗೃತ ಕ್ರಮವಾಗಿ ಅಧಿಕಾರಿಗಳು ಡಂಗುರ ಸಾರಿಸಿದ್ದಾರೆ. ಘಟಪ್ರಭಾ ನದಿಗೆ ಜಲಾವೃತವಾಗುವ ಬಾಗಲಕೋಟೆ ‌ಜಿಲ್ಲೆಯ ಮುಧೋಳ ತಾಲ್ಲೂಕಿನ ಮಿರ್ಜಿ ಗ್ರಾಮ ಜನರಿಗೆ ಸರಕಾರಿ ಪ್ರಾಥಮಿಕ ಶಾಲೆ ಕಡೆ ಬರಲು ಡಂಗುರದ‌ ಮೂಲಕ ಸೂಚನೆ ನೀಡಲಾಗಿದೆ. ಇನ್ನು ರಬಕವಿ ಬನಹಟ್ಟಿ, ಮುದೋಳ, ಬೀಳಗಿ , … Continue reading ಪ್ರವಾಹ ಭೀತಿ ಹಿನ್ನಲೆ: 32 ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ