ತಪ್ಪು ಮಾಹಿತಿ ದಾಖಲಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟ ; ಕಲಘಟಗಿ ತಹಶೀಲ್ದಾರ್ ಅಮಾನತು

ಧಾರವಾಡ: 2024-25 ಹಂಗಾಮಿನಲ್ಲಿ ಬೆಳೆಹಾನಿ ಸಂಬಂಧಿಸಿದಂತೆ ತಂತ್ರಾಂಶದಲ್ಲಿ ತಪ್ಪು ಮಾಹಿತಿ ದಾಖಲಿಸಿ ಸರಕಾರಕ್ಕೆ ಆರ್ಥಿಕ ನಷ್ಟಮಾಡಿದ ಆರೋಪದಡಿ ಕಲಘಟಗಿ ತಹಶೀಲ್ದಾರ್‌ ವಿ.ಎಸ್. ಮುಳುಗುಂದಮಠ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.   ಕಂದಾಯ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ರಾಘವೇಂದ್ರ ಟಿ. ಆದೇಶ ಹೊರಡಿಸಿದ್ದು, ತಹಶೀಲ್ದಾ‌ರ್ ಗ್ರೇಡ್-1 ಆಗಿದ್ದ ಮುಳುಗುಂದಮಠ ಅವರಿಗೆ ಅಮಾನತಿನ ಅವಧಿಯಲ್ಲಿ ಕೆಸಿಎಸ್‌ಆರ್ ನಿಯಮದನ್ವಯ ನಿಗದಿಪಡಿಸಿದ ಜೀವನಾಧಾರ ಭತ್ಯೆ ಪಡೆಯಲು ಅನುವಾಗುವಂತೆ ವಿಜಯನಗರ ಜಿಲ್ಲೆಯ ಕೂಡಗಿ ತಹಶೀಲ್ದಾರ್‌ ಗ್ರೇಡ್- 2 ಖಾಲಿ ಹುದ್ದೆಗೆ ವರ್ಗಾಯಿಸಲಾಗಿದೆ. … Continue reading ತಪ್ಪು ಮಾಹಿತಿ ದಾಖಲಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟ ; ಕಲಘಟಗಿ ತಹಶೀಲ್ದಾರ್ ಅಮಾನತು