ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಣ ಬಿಸಿಲಿನ ಜೊತೆಗೆ ಒಂದೊಂದೇ ರೋಗಗಳು ವಕ್ಕರಿಸಿಕೊಳ್ತಿವೆ.. ಬಿರು ಬಿಸಿಲ ಮಧ್ಯೆ ನಿರ್ಲಕ್ಷ್ಯ ಮಾಡಿದ್ರೆ ನಿಮಗೆ ಈ ಕಾಯಿಲೆ ಬರೋದು ಪಕ್ಕಾ ಅಂತಿದ್ದಾರೆ ವೈದ್ಯರು… ಹಾಗಾದ್ರೆ ಆ ಕಾಯಿಲೆ ಯಾವುದು ಅಂದ್ರಾ ಇಲ್ಲಿದೆ ನೋಡಿ ಡೀಟೇಲ್ಸ್. ದಶಕಗಳ ರೆಕಾರ್ಡ್ ಬ್ರೇಕ್ ಮಾಡ್ತಿರುವ ರಣ ಬಿಸಿಲಿನ ತಾಪಕ್ಕೆ ಸಿಲಿಕಾನ್ ಸಿಟಿ ಮಂದಿ ಹೈರಾಣಾಗಿದ್ದಾರೆ.
ದಿನದಿಂದ ದಿನಕ್ಕೆ ಏರ್ತಿರುವ ತಾಪಮಾನದ ತಲೆಬಿಸಿಯ ಜೊತೆ ಒಂದಿಲ್ಲೊಂದು ಆರೋಗ್ಯ ಸಮಸ್ಯೆ ಬಾಧಿಸುತ್ತಲೇಯಿದೆ.. ಜ್ವರ, ಸುಸ್ತು, ಡೆಂಗ್ಯೂ, ಚಿಕನ್ ಗುನ್ಯಾ ಸಾಲಿಗೆ ಕಿಡ್ನಿ ಸಮಸ್ಯೆ ಕೂಡ ಸೇರಿಕೊಂಡಿದೆ. ಸಿಲಿಕಾನ್ ಸಿಟಿಯಲ್ಲಿ ಕಿಡ್ನಿ ಸ್ಟೋನ್ ಪ್ರಕರಣ ದುಪ್ಪಟ್ಟಾಗಿದ್ದು… ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಸಮಸ್ಯೆ ಕಂಡು ಬಂದಿದ್ದು ಎಚ್ಚರ ಎಚ್ಚರ ಅಂತಿದ್ದಾರೆ ತಜ್ಞ ವೈದ್ಯರು.
ರೈತರೇ ಗಮನಿಸಿ.. ಸಪೋಟ ಹಣ್ಣಿನ ಕೃಷಿಯಿಂದ ಗಳಿಸಬಹುದು ಲಕ್ಷಗಟ್ಟಲೇ ಆದಾಯ..!
ಸಾಮಾನ್ಯ ಅವಧಿಗಿಂತ ಬೇಸಿಗೆಯಲ್ಲಿ ಶೇ.40 ರಷ್ಟು ಪ್ರಕರಣ ಹೆಚ್ಚು ಕಂಡು ಬಂದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.20 ರಿಂದ 40 ವರ್ಷದವರಲ್ಲೇ ಕಿಡ್ನಿ ಸ್ಟೋನ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಬೇಸಿಗೆಯಲ್ಲಿ ಕಿಡ್ನಿ ಸ್ಟೋನ್ ಉಂಟಾಗಲು ಪ್ರಮುಖ ಕಾರಣವೆಂದರೆ ದೇಹದಲ್ಲಿನ ನಿರ್ಜಲೀಕರಣ. ಮನುಷ್ಯನ ದೇಹಕ್ಕೆ ದಿನವೊಂದಕ್ಕೆ 2ರಿಂದ 3 ಲೀ. ನೀರು ಅಗತ್ಯ. ಆದರೆ ಬೇಸಿಗೆಯಲ್ಲಿ ಬೆವರು ಹೆಚ್ಚಾಗಿ ಹೋಗಿ ದೇಹದಲ್ಲಿರುವ ನೀರಿನ ಅಂಶ ಕಮ್ಮಿಯಾಗುತ್ತೆ. ಇದು ನೇರವಾಗಿ ಮೂತ್ರದ ಸೋಂಕು ಹಾಗೂ ಕಿಡ್ನಿ ಸ್ಟೋನ್ಗೆ ಕಾರಣವಾಗುತ್ತಿದೆ.ಜೊತೆಗೆ ಹೆಚ್ಚಿನ ಪ್ರೋಟೀನ್,
ಉಪ್ಪು ಮತ್ತು ಸಕ್ಕರೆ ಸೇವನೆ, ಸೇವಿಸುವ ಆಹಾರ, ಬೊಜ್ಜು ಕಿಡ್ನಿ ಸ್ಟೋನ್ಗೆ ಕಾರಣವಾಗುತ್ತಿದೆ. ಕಿಡ್ನಿ ಸಮಸ್ಯೆಯಿಂದ ಪಾರಗಬಹುದು ಮೂತ್ರ ವಿಸರ್ಜನೆ ತಡೆಯಬಾರದು ಜೊತೆಗೆ ದಿನಕ್ಕೆ 2ರಿಂದ 3 ಲೀ.ನಷ್ಟು ನೀರು ಕುಡಿಬೇಕು ಅಂತಾರೆ ವೈದ್ಯರು. ಒಟ್ಟಿನಲ್ಲಿ ವರುಣನ ಅವಕೃಪೆಗೆ ಬಿರು ಬಿಸಿಲಿನ ಬೇಗೆಗೆ ದಿನಕ್ಕೊಂದು ಆರೋಗ್ಯ ಸಮಸ್ಯೆ ಜನರಿಗೆ ಕಾಡುತ್ತಿದ್ದು ಮಳೆರಾಯ ಬೇಗ ಬಾರಪ್ಪ ಅಂತ ಜನ ಪ್ರಾರ್ಥಿಸಿ ಕೊಳ್ತಾ ಇದ್ದಾರೆ.