ಯುಗಾದಿ ಸಂಭ್ರಮ: ಶ್ರೀ ಶಂಕರಲಿಂಗ ದೇವಸ್ಥಾನಕ್ಕೆ ಹರಿದು ಬರುತ್ತಿರುವ ಭಕ್ತಸಾಗರ!

ಗದಗ:- ಇಂದು ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬದ ಹಿನ್ನೆಲೆ ಐತಿಹಾಸಿಕ ಶ್ರೀ ಶಂಕರಲಿಂಗ ದೇವಸ್ಥಾನಕ್ಕೆ ಭಕ್ತಸಾಗದ ಹರಿದು ಬರ್ತಿದೆ. ರಕ್ಷಣೆಗೆ ಗನ್ ಇಟ್ಟುಕೊಂಡಿರ್ತಾರೆ, ಸೆಕ್ಯುರಿಟಿ ವೈಫಲ್ಯ ಆಗಿಲ್ಲ – DCM ಡಿಕೆಶಿ! ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ಶ್ರೀ ಶಂಕರಲಿಂಗ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿದೆ. ಅಲಂಕೃತನಾದ ಶ್ರೀ ಶಂಕರಲಿಂಗನಿಗೆ ದೀಪ ಬೆಳಗಿ ಕಾಯಿ ಒಡೆದು ಜನರು ನಮಿಸುತ್ತಿದ್ದಾರೆ. ಆ ಮೂಲಕ ಒಳ್ಳೇದಾಗಲಿ ಎಂದು ಶಂಕರಲಿಂಗನಲ್ಲಿ ಭಕ್ತಾದಿಗಳು ಬೇಡಿಕೊಂಡಿದ್ದಾರೆ.