ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣದ ಕುರಿತಾದ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದು, ಟ್ರೋಲ್ ಪೇಜ್, ಫ್ಯಾನ್ಸ್ ಪೇಜ್ ಸೇರಿದಂತೆ ಹಲವು ಸೋಷಿಯಲ್ ಪೇಜ್ಗಳಲ್ಲಿ ಈ ಕುರಿತು ಚರ್ಚೆ ಜೋರಾಗಿದೆ. ಈ ಸಂದರ್ಭ ತಂದೆ ಅರೆಸ್ಟ್ ಆಗಿರುವ ಬಗ್ಗೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಪುತ್ರ ವಿನೀಶ್ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ. ಸದ್ಯ ತಂದೆಗಾಗಿ ಮಗ ಮಾಡಿರುವ ಈ ಪೋಸ್ಟ್ ವೈರಲ್ ಆಗಿದೆ
ಮೂರು ಪಂದ್ಯದಲ್ಲೂ ಕೊಹ್ಲಿ ವಿಫಲ… ವಿರಾಟ್ ಬ್ಯಾಟಿಂಗ್ ಬಗ್ಗೆ ಗವಾಸ್ಕರ್ ಹೇಳಿದ್ದೇನು!?
ಕೆಟ್ಟದಾಗಿ ಕಮೆಂಟ್ ಮಾಡಿದ ಎಲ್ಲರಿಗು ಧನ್ಯವಾದಗಳು. ನನ್ನ ತಂದೆಯ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ನೀವು 15 ವರ್ಷದ ಮಗನನ್ನ ಪರಿಗಣಿಸಲೆ ಇಲ್ಲ. ನನ್ನ ಭಾವನೆಗಳಿಗೆ ಬೆಲೆ ಕೊಡದ ನೀವು ಈ ಕಷ್ಟದ ಸಮಯದಲ್ಲಿ ನನ್ನ ತಾಯಿ ಮತ್ತು ತಂದೆಗೆ ಬೆಂಬಲದ ಅಗತ್ಯವಿರುವಾಗ ನನ್ನನ್ನು ಶಪಿಸುವುದರಿಂದ ಏನೂ ಬದಲಾಗುವುದಿಲ್ಲ ಎಂದು ಬರೆದಿದ್ದಾರೆ
ದರ್ಶನ್ ಅವರನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದ್ದು ನಟ ಸದ್ಯ ಹೊರಗೆ ಬರುವ ಲಕ್ಷಣ ಕಾಣಿಸುತ್ತಿಲ್ಲ. ಪವಿತ್ರಾ ಗೌಡ ಅವರ ಮಗಳೂ ಕೂಡಾ ಅಮ್ಮನನ್ನು ನೋಡಲು ಬಂದಿದ್ದರು. ಪವಿತ್ರಾ ಗೌಡ ತಾಯಿಯ ಜೊತೆ ಪವಿತ್ರಾ ಗೌಡ ಮಗಳು ಅಮ್ಮನನ್ನು ಭೇಟಿಯಾಗಲು ಬಂದಿದ್ದರು.
ವಿಜಯಲಕ್ಷ್ಮಿ ದರ್ಶನ್ ಅವರು ಪತಿ ಅರೆಸ್ಟ್ ಆದ ಬೆನ್ನಲ್ಲಿಯೇ ಇನ್ಸ್ಟಾಗ್ರಾಮ್ ಡಿಪಿ ರಿಮೂವ್ ಮಾಡಿದ್ದರು. ಅದರ ಮಧ್ಯೆ ಡಿವೋರ್ಸ್ ಸುದ್ದಿಯೂ ಕೇಳಿ ಬಂದಿತ್ತು.
ಪೋಸ್ಟ್