ಬೆಂಗಳೂರು:- ಐಎಲ್ಐ, ಸಾರಿ ರೋಗಿಗಳಿಗೂ ಕೋವಿಡ್ ಪರೀಕ್ಷೆ ಕಡ್ಡಾಯ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಈವರೆಗೆ ಐಎಲ್ಐ ಮತ್ತು ಸಾರಿ ರೋಗಿಗಳಲ್ಲಿ ಪ್ರತಿ 20 ಪ್ರಕರಣಗಳಲ್ಲಿ ಒಬ್ಬರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿತ್ತು. ಇನ್ನು ಮುಂದೆ ಎಲ್ಲರಿಗೂ ಪರೀಕ್ಷೆ ನಡೆಸುವಂತೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ’ ಎಂದರು.
ಪ್ರತಿ ದಿನ 7,000 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಈಗ ಕೋವಿಡ್ ದೃಢಪ್ರಮಾಣ ದರ ಶೇಕಡ 3.82ರಷ್ಟಿದೆ. ನೆರೆಯ ಕೇರಳದಲ್ಲಿ ಕೋವಿಡ್ ದೃಢಪ್ರಮಾಣ ದರ ಇಳಿಕೆಯಾಗುತ್ತಿದೆ. ರಾಜ್ಯದಲ್ಲಿ ಇನ್ನೂ ಇಳಿಮುಖವಾಗಿಲ್ಲ. ಆದ್ದರಿಂದ ಕೋವಿಡ್ ದೃಢಪಟ್ಟವರ ಮೇಲೆ ತೀವ್ರ ನಿಗಾ ಇರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.