ಬೀದರ್:- ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಕಾಂಗ್ರೆಸ್, ಹೀಗಾಗಿ ಈ ದೇಶ ಯಾವತ್ತಿದ್ರೂ ನಮ್ಮದು ಎಂದು ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ.
ವಕ್ಫ್ ಆಸ್ತಿ ಯತ್ನಾಳ್ ಅಪ್ಪನಲ್ಲದಲ್ಲ ಅಂತ ಜಮೀರ್ ಹೇಳಿದ ಬಳಿಕ ಎದಿರೇಟು ನೀಡಿದ ಯತ್ನಾಳ್ ಅದು ಅವರಪ್ಪನ ಆಸ್ತಿನೂ ಅಲ್ಲ ಎಂದರು.
ಅದು ಅವರಪ್ಪನ ಅಸ್ತಿಯೂ ಅಲ್ಲ ನಮ್ಮಪ್ಪನ ಆಸ್ತಿಯೂ ಅಲ್ಲ, ಅದು ದಾನಿಗಳ ಕೊಡುಗೆಯಿಂದ ಸ್ಥಾಪಿತವಾಗಿರುವ ಆಸ್ತಿ ಎಂದು ಹೇಳಿದರು. ನೀವು ಪಾಕಿಸ್ತಾನಕ್ಕೆ ಹೋಗಬೇಕು ಎಂದಿದ್ದಾರೆ ಅಂತ ಮಾಧ್ಯಮದವರು ಹೇಳಿದಾಗ ಈ ದೇಶ ನಂದು, ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದ್ದಾಗ ಕಾಂಗ್ರೆಸ್ ದೇಶದ ಜೊತೆ ನಿಂತಿದ್ದರೆ ಬಿಜೆಪಿ ಮತ್ತು ಆರೆಸ್ಸಸ್ ಯಾರ ಜೊತೆ ಇದ್ದರು ಅಂತ ಇತಿಹಾಸದಲ್ಲಿ ಸವಿಸ್ತಾರವಾಗಿ ನಮೂದಾಗಿದೆ, ಈ ದೇಶ ಯಾವತ್ತಿಗೂ ನಮ್ಮದು, ಅದರ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಕಾಂಗ್ರೆಸ್ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.