ಚಿತ್ರದುರ್ಗ: ಮಗನಿಂದಲೇ ತಂದೆಯ ಬರ್ಬರ ಕೊಲೆ!

ಚಿತ್ರದುರ್ಗ:-ಹಿರಿಯೂರು ತಾಲೂಕಿನ ಕುಂದಲಗುರ ಗ್ರಾಮದಲ್ಲಿ ಮಗನೇ ತನ್ನ ತಂದೆಯನ್ನು ಕೊಲೆಗೈದ ಘಟನೆ ಜರುಗಿದೆ. Shimoga: ಹೆಜ್ಜೇನು ದಾಳಿಯಿಂದ 7 ಜನರಿಗೆ ಗಾಯ, ಓರ್ವ ಗಂಭೀರ! ರಂಗಸ್ವಾಮಿ(50) ಮೃತ ದುರ್ದೈವಿ. ಮಗ ದೇವರಾಜ್ ಎಂಬಾತನಿಂದ ಈ ಕೊಲೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ‌ ತಂದೆ-ಮಗನ ಮಧ್ಯೆ ಆರಂಭವಾದ ಜಗಳ, ಕೊಲೆಯಲ್ಲಿ ಅಂತ್ಯವಾಗಿದೆ. ಸ್ಥಳಕ್ಕೆ‌ ಅಬ್ಬಿನಹೊಲೊಳೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.