Facebook Twitter Instagram YouTube
    ಕನ್ನಡ English తెలుగు
    Wednesday, November 29
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    ಕರಿಹೇನು ಮತ್ತು ಬೂದಿ ರೋಗದಿಂದ ಮೆಣಸಿನಕಾಯಿ ಬೆಳೆ ಹಾನಿ: ಕಣ್ಣೀರಿನಲ್ಲಿ ಕೈತೊಳೆಯುವಂತಾದ ರೈತರು!

    AIN AuthorBy AIN AuthorNovember 21, 2023
    Share
    Facebook Twitter LinkedIn Pinterest Email

    ಮಳೆ ಕೊರತೆ, ವೈರಸ್‌, ಚೆಂಡು ಮುದುರು, ಕರಿಹೇನು ಮತ್ತು ಬೂದಿ ರೋಗದಿಂದ ಮೆಣಸಿನಕಾಯಿ ಬೆಳೆ ಹಾನಿಯಾಗಿದ್ದು ಲಾಭದ ನಿರೀಕ್ಷೆಯಲ್ಲಿದ್ದ ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

    ಹೆಚ್ಚಿನ ಲಾಭ ಪಡೆಯುವ ನಿರೀಕ್ಷೆಯಿಂದ ಸಹಸ್ರಾರು ಎಕರೆಯಲ್ಲಿ ರೈತರು ಮೆಣಸಿನಕಾಯಿ ಬೆಳೆದಿದ್ದಾರೆ. ಆದರೆ ಫಲ ಕೈಗೆ ಬರುವ ಸಮಯದಲ್ಲಿಕಾಲುವೆಗೆ ನೀರು ಸ್ಥಗಿತವಾಗುವ ಸ್ಥಿತಿ, ರೋಗದ ಭಯದಿಂದ ಬೆಳೆಗಾರರ ಸಾಲದ ಬಾಧೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲಎಂಬ ಕೊರುಗು ಕಾಡುತ್ತಿದೆ.

    Demo

    ಬಿತ್ತನೆಯಾದ ಮೆಣಸಿನಕಾಯಿ ಎರಡೂವರೆಯಿಂದ ನಾಲ್ಕು ಅಡಿ ಎತ್ತರ ಬೆಳೆದು ನೀರಿಗಾಗಿ ಬಾಯಿ ತೆರೆಯಿತು. ಆಕಾಶ ಮಳೆ ಬಿತ್ತುವ ಬದಲು ಬೆಂಕಿ ಬಿಸಿಲು ಮತ್ತು ಬರ ಬಿದ್ದಿತು. ತುಂಗಭದ್ರಾ ಜಲಾಶಯದಲ್ಲಿ ನೀರು ಸಂಗ್ರಹಣೆಗೊಳ್ಳದೇ ಎಚ್‌ಎಲ್‌ಸಿ ಮತ್ತು ಎಲ್‌ಎಲ್‌ಸಿ ಕಾಲುವೆಗೆ ನೀರು ಕಡಿತಗೊಳಿಸಲು ನ. 20ರವರೆಗೆ ಗಡುವು ನೀಡಿದೆ.

    ಈ ವರ್ಷ ಲಾಭ ಪಡೆಯುವ ನಿರೀಕ್ಷೆಯಿಂದ ತಾಲೂಕಿನಲ್ಲಿ ಒಟ್ಟು 15 ರಿಂದ 20 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ತಲೆ ಎತ್ತಿದೆ. ರೈತರು ಇಂಪ್ರೂವ್ಡ್ ತಳಿಯ ಮೆಣಸಿನಕಾಯಿ ಬೀಜದಿಂದ ನರ್ಸರಿಯಲ್ಲಿ ಬೆಳೆಸಿ, ನಂತರ ಜಮೀನಿನಲ್ಲಿ ಸಸಿ ನಾಟಿ ಮಾಡಿದ್ದರು. ಆದರೆ ಮಳೆ ಇಲ್ಲದೇ ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಹಾಗೂ ಮೆಣಸಿಕಾಯಿ ಬೆಳೆಯಲ್ಲಿ ಚೆಂಡು ಮುದುರು, ವೈರಸ್‌ ರೋಗ ಹಾಗೂ ಕರಿಹೇನುಗಳು ಕಾಣಿಸಿಕೊಂಡಿದೆ. ಹೀಗಾಗಿ ರೈತರನ್ನು ಚಿಂತೆ ಕಾಡುತ್ತಿದೆ.

    ತೋಟಗಾರಿಕೆ ಇಲಾಖೆಯ ಬೆಳೆ ವಿಮೆಯ ಬಗ್ಗೆ ಪ್ರಚಾರ ನಡೆಸಲಾಗಿದೆ ಎಂದು ಹೇಳಿದೆ. ಆದರೆ ತಾಲೂಕಿನಲ್ಲಿ2000ಹೆ. ರೈತರಿಗೆ ಮಾತ್ರ ತಲುಪಿದೆ. ಉಳಿದೆಡೆ ಜಾಗೃತಿ ಶೂನ್ಯವಾಗಿದೆ. ಪ್ರಕೃತಿ ವಿಕೋಪದಿಂದ ನಷ್ಟ ಹೊಂದಿದ ಬೆಳೆಗೆ ಮಾತ್ರ ವಿಮೆ ಹಣ ಧಕ್ಕುವ ನೀತಿ ಇದೆ. ಆದರೆ ಮಳೆ ಇಲ್ಲದೆ ಬರದಿಂದ ಬೆಳೆ ರೋಗಕ್ಕೆ ತುತ್ತಾಗಿದೆ ಹಾಗೂ ಪ್ರಾಕೃತಿಕ ವೈಪರೀತ್ಯ ಎಂದು ಪರಿಗಣಿಸಿ ಸರಕಾರ ಪರಿಹಾರ ಒದಗಿಸಬೇಕು ಎಂಬುದು ರೈತರ ಬೇಡಿಕೆಯಾಗಿದೆ.


    Share. Facebook Twitter LinkedIn Email WhatsApp

    Related Posts

    PM Kissan Scheme: ಪಿಎಂ ಕಿಸಾನ್ ಸ್ಕೀಮ್ನಲ್ಲಿ 15ನೇ ಕಂತಿನ ಹಣ ಬಂದಿಲ್ಲವೇ: ಹೀಗೆ ಮಾಡಿ ಸಾಕು!

    November 29, 2023

    ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯ ಸೌಲಭ್ಯಕ್ಕಾಗಿ ನೋಂದಾಯಿಸಿ ಸೂಚನೆ!

    November 28, 2023

    ಜಾನುವಾರುಗಳಲ್ಲಿ ರಕ್ತಹೀನತೆ ಸಮಸ್ಯೆ: ಲಕ್ಷಣಗಳು, ಸೂಕ್ತ ಚಿಕಿತ್ಸಾ ವಿಧಾನಗಳ ಕ್ರಮ ಇಲ್ಲಿದೆ!

    November 27, 2023

    ಒಣಗುವ ಪರಿಸ್ಥಿತಿಯಲ್ಲಿದ್ದ ಮೆಣಸಿನಕಾಯಿ ಸೇರಿ ಬಹುತೇಕ ಬೆಳೆಗಳಿಗೆ ಮಳೆ ಆಸರೆ: ಭತ್ತದ ಬೆಳೆ ಮಾತ್ರ ನೆಲಕಚ್ಚಿ ರೈತರಿಗೆ ನಷ್ಟ

    November 26, 2023

    ಕೈಕೊಟ್ಟ ಹಿಂಗಾರು ಮಳೆ: ತೈಲ ಆಧಾರಿತ ಇಂಜಿನ್ ಗಳುಳ್ಳ ಪಂಪ್ ಸೆಟ್ ಗಳ ಖರೀದಿಗೆ ಮುಂದಾದ ರೈತರು!

    November 25, 2023

    Krishnabyregowda: ರೈತರಿಗೆ ಪರಿಹಾರ ನೀಡಲು ಕೇಂದ್ರಕ್ಕೆ ಮನವಿ : ಸಚಿವ ಕೃಷ್ಣಬೈರೇಗೌಡ!

    November 24, 2023

    ಈ ಜಿಲ್ಲೆಯಲ್ಲಿ ರೈತರಿಂದ ಮೀನುಮರಿಗಳ ಬಿತ್ತನೆ: ಲಕ್ಷ ಲಕ್ಷ ಆದಾಯಗಳಿಸುತ್ತಿರುವ ಮೀನು ಕೃಷಿ!

    November 24, 2023

    ಬರ ಘೋಷಣೆಗಷ್ಟೇ ಸೀಮಿತವಾದ ಸರ್ಕಾರದ ಕಾರ್ಯ, ಈವರೆಗೂ ಪರಿಹಾರವಿಲ್ಲ: ರೈತರ ಅಸಮಾಧಾನ!

    November 23, 2023

    ರೈತರು ಬರ ಪರಿಹಾರ ಪಡೆಯಬೇಕಾದರೆ ಈ ID ಹೊಂದಿರಲೇಬೇಕು: ನೋಂದಣಿ ಗಡುವು ನ.30ರವರೆಗೆ ವಿಸ್ತರಣೆ!

    November 22, 2023

    Krushi Mela: ಜಿಕೆವಿಕೆಯಲ್ಲಿ ನಡೆಯುತ್ತಿರುವ 4 ದಿನಗಳ ಕೃಷಿ ಮೇಳಕ್ಕೆ ಇಂದು ತೆರೆ!

    November 20, 2023

    ದೇಶದ ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಇಲ್ಲಿದೆ ಸರಳ ಮಾರ್ಗ!

    November 20, 2023

    ಪಿಎಂ ಕಿಸಾನ್ ಸ್ಕೀಮ್​ನಲ್ಲಿ 15ನೇ ಕಂತಿನ ಹಣ ಬಂದಿಲ್ಲದಿದ್ದರೆ ಹೀಗೆ ಮಾಡಿ!

    November 19, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.