ಮಂಡ್ಯ : ಸಿಎಸ್ ಪುಟ್ಟರಾಜು ಅವರು ಚಿನಕುರುಳಿ ಸಂಸ್ಥಾನದ ಮಹಾರಾಜರ ಮೊಮ್ಮಕ್ಕಳು. ನಾವು ಬಡ ಕುಟುಂಬದವರು, ಗೆಲ್ಲೋದೆ ಪುಣ್ಯ. ಅವರು ಮಹಾರಾಜರ ಮೊಮ್ಮಕ್ಕಳು ಗೆಲುವು ಅವರ ಜೇಬಲ್ಲಿ ಇರುತ್ತದೆ ಎಂದು ಕಾಂಗ್ರೆಸ್ ಶಾಸಕ ರವಿ ಗಾಣಿಗ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ತಮ್ಮ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದಿದ್ದ ಸಿಎಸ್ ಪುಟ್ಟರಾಜು ಅವರಿಗೆ ತಿರುಗೇಟು ನೀಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಮಹಾರಾಜರ ಮೊಮ್ಮಕ್ಕಳಿಗೂ, ಬಡವರ ಮಕ್ಕಳಿಗೂ ವ್ಯತ್ಯಾಸ ಇದೆ. ಪುಟ್ಟರಾಜು ಅವರು ಚಿನಕುರುಳಿ ಸಂಸ್ಥಾನ ಆಳಿರುವವರು. ಅವರಿಗೆ ಎಲ್ಲರಿಗೂ ಏಕವಚನದಲ್ಲಿ ಮಾತಾಡಿ ರೂಢಿಯಾಗಿದೆ. ಅವರ ಮಟ್ಟಕ್ಕೆ ಹೋಗಿ ನಾವು ಮಾತಾಡಲ್ಲ. ಅವರು ಎಂಪಿ ಆಗುವಾಗ ಯಾರು ಟಿಕೆಟ್ ಕೊಟ್ಟರು. ಸಚಿವ ಚಲುವರಾಯಸ್ವಾಮಿ ಏನು ಸಹಾಯ ಮಾಡಿದ್ರು ಎಂದು ನೆನಪಿಕೊಳ್ಳಬೇಕು ಎಂದರು.
![Demo](https://ainlivenews.com/wp-content/uploads/2023/12/spoorthi-1.jpg)
ಬೆಳಗ್ಗೆ ಎದ್ದಾಗ ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರು ಕುಡಿಯಿರಿ, ಬೊಜ್ಜು ಕರಗಿಸಿಕೊಳ್ಳಿ!
ಬಾಯಿ ಇದೆ ಎಂದು ಎಲ್ಲರ ಮೇಲೂ ಎಗರಬಾರದು. ಅವರು ಫ್ರಸ್ಟರೇಶನ್ನಲ್ಲಿ ಇದಾರೆ ಏನು ಮಾಡೋಕೆ ಆಗಲ್ಲ. ಅವರಿಂದ ಅಂತಹದ್ದೇ ನಿರೀಕ್ಷೆ ಮಾಡಬೇಕು. ಮಾತನಾಡಲು, ಮಾನನಷ್ಟ ಮೊಕದ್ದಮೆ ದಾಖಲಿಸಲು ಎಲ್ಲರೂ ಸರ್ವ ಸ್ವತಂತ್ರರು. ಮಹಾರಾಜರ ಮಕ್ಕಳ ಜೊತೆ ಬಡವರ ಮಕ್ಕಳು ಹೋರಾಟ ಮಾಡೋಕೆ ಆಗಲ್ಲ. ಬಡವರ ಮಕ್ಕಳು ಕೆಲಸ ಮಾಡಿಕೊಂಡು ಹೊಲ ಹುತ್ತುಕೊಂಡು ಇರಬಹುದು ಅಷ್ಟೇ. ಅವರು ಮಹಾರಾಜರ ಮೊಮ್ಮಕ್ಕಳು ಕಾಲು ಮೇಲೆ ಕಾಲು ಹಾಕಿಕೊಂಡು ಕೂತುಕೊಳ್ಳಲಿ, ನಾವು ಕೇಮೆ ಮಾಡಿಕೊಂಡೆ ಇರ್ತೀವಿ ಎಂದು ಹೇಳಿದರು.
![](https://ainlivenews.com/wp-content/uploads/2024/01/Ad-Banner-copy-scaled.jpg)