ಚಾಮರಾಜನಗರ:- ಕರಡಿ ದಾಳಿಯಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅಜ್ಜಿಪುರ ಗ್ರಾಮದಲ್ಲಿ ಜರುಗಿದೆ.
ಹನೂರು ತಾಲೂಕಿನ ಅಜ್ಜೀಪುರ ಗ್ರಾಮದ ಶಿವಶಕ್ತಿ ಬಾರ್ ಪಕ್ಕದಲ್ಲಿ ಅಂಗಡಿ ಮೇಲೆ ತಡ ರಾತ್ರಿ ಕರಡಿ ದಾಳಿ ಮಾಡಿದೆ. ಮನದೇಗೌಡ ಬಿನ್ ಬಚ್ಚೇಗೌಡರ ಅಂಗಡಿ ಮೇಲೆ ಕರಡಿ ದಾಳಿ ಮಾಡಿದ್ದು, ಅಂಗಡಿಯಲ್ಲಿದ್ದ ದಾಸ್ತಾನುಗಳನ್ನು ಕರಡಿ ನಾಶ ಪಡಿಸಿದೆ.
ಅದೃಷ್ಟವಶಾತ್ ಯಾರೂ ಇಲ್ಲದ ಕಾರಣ ಅನಾಹುತ ತಪ್ಪಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂಧಿಗಳು ಭೇಟಿ ಪರಿಶೀಲನೆ ಮಾಡಿದ್ದಾರೆ.