ಶಿವಮೊಗ್ಗ:- ಬಿಜೆಪಿ ನಾಯಕರಿಗೆ ಕಿತಾಪತಿ ಮಡೋದು ಬಿಟ್ಟರೆ ಬೇರೇನೂ ಗೊತ್ತು ಎಂದು ಮಧು ಬಂಗಾರಪ್ಪ ಪ್ರಶ್ನೆ ಮಾಡಿದ್ದಾರೆ.
ರಾಜ್ಯ ಭೀಕರ ಬರದಿಂದ ತತ್ತರಿಸಿರುವಾಗ ಕರ್ನಾಟಕ ಸರ್ಕಾರ ಮಂತ್ರಿಗಳಿಗಾಗಿ ಐಷಾರಾಮಿ ಕಾರು ಕೊಂಡಿರುವುದಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ಷೇಪಣೆ ಎತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದರು.
![Demo](https://ainlivenews.com/wp-content/uploads/2023/12/spoorthi-1.jpg)
ಬರಗಾಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯವರು 10 ಕೇಜಿ ಅಕ್ಕಿ ಕೋಡೋದನ್ನ ನಿಲ್ಲಿಸಿದ್ದಾರಾ? ಮಹಿಳೆಯರಿಗೆ ರೂ. 2,000 ಕೊಡೋದನ್ನು ನಿಲ್ಲಿಸಿದ್ದಾರಾ? ಶಕ್ತಿ ಯೋಜನೆ ನಿಂತಿದೆಯಾ? ಬರ ಅಂತ ಯಾವ ಯೋಜನೆಯನ್ನೂ ಸರ್ಕಾರ ನಿಲ್ಲಿಸಲ್ಲ, 35-40 ಕಾರುಗಳನ್ನು ಖರೀದಿಸಿದರೆ, ಖಜಾನೆ ಖಾಲಿಯಾಗುತ್ತದೆ ಅಂತ ಬಿಜೆಪಿ ನಾಯಕರು ಹೇಳುತ್ತಾರೆ, ಇಂಥ ಕಿತಾಪತಿ ಮಡೋದನ್ನು ಬಿಟ್ಟರೆ ಬೇರೇನೂ ಅವರಿಗೆ ಗೊತ್ತಿಲ್ಲ ಎಂದು ಮಧು ಬಂಗಾರಪ್ಪ ಹೇಳಿದರು.
![](https://ainlivenews.com/wp-content/uploads/2024/01/Ad-Banner-copy-scaled.jpg)