ಬೆಂಗಳೂರು: ಬಿಎಂಟಿಸಿ, ಕಿಲ್ಲರ್ ಬಿಎಂಟಿಸಿ ಎಂಬೆಲ್ಲಾ ಹಣೆಪಟ್ಟಿ ಕಟ್ಟಿಕೊಳ್ಳುತ್ತಿದೆ. ಆದರೆ ಬಿಎಂಟಿಸಿ ಪ್ರಕಾರ ಸಂಸ್ಥೆಯ ಚಾಲಕರ ನಿರ್ಲಕ್ಷ್ಯ ಮಾತ್ರವೇ ಇದಕ್ಕೆಲ್ಲ ಕಾರಣ ಅಲ್ಲವಂತೆ. ಹಾಗಾದ್ರೆ ಆಗ್ತಿರೋ ಅಪಘಾತ ಪ್ರಕರಣಗಳಲ್ಲಿ ಬಿಎಂಟಿಸಿ ಪಾತ್ರ ಏನು..? ಬೈಕ್ ಸವಾರರು ಯಾಕೆ ಕಾರಣ? ಅವರ ಸಬೂಬು ಏನು ಅಂತೀರಾ..? ಈ ಸ್ಟೋರಿ ನೋಡಿ..
ಇತ್ತೀಚೆಗೆ ಮೇಲಿಂದ ಮೇಲೆ ವರದಿಯಾಗುತ್ತಿರುವ ಬಿಎಂಟಿಸಿ ಬಸ್ಗಳ ಅಪಘಾತಗಳು ಸಂಸ್ಥೆಯನ್ನ ಮುಜುಗರಕ್ಕೀಡು ಮಾಡಿದೆ. ಬಿಎಂಟಿಸಿ ಬಸ್ ಅಪಘಾತಗಳಲ್ಲಿ ಪ್ರಯಾಣಿಕರು ಸಾವನ್ನಪ್ಪುತ್ತಿದ್ದು, ಇದಕ್ಕೆ ಚಾಲಕರ ನಿರ್ಲಕ್ಷ್ಯದ ಚಾಲನೆಯೇ ಕಾರಣ, ಕಿಲ್ಲರ್ ಬಿಎಂಟಿಸಿ ಅಂತಾ ಆಕ್ರೋಶವೂ ವ್ಯಕ್ತವಾಗಿದೆ.ಆದರೆ ಬಿಎಂಟಿಸಿ ಇದು ನಮ್ಮ ತಪ್ಪಲ್ಲ ಬೈಕ್ ಸವಾರರ ರ್ಯಾಷ್ ಡ್ರೈವಿಂಗ್ ಕಾರಣ ಅಂತ ಸಿಸಿಟಿವಿ ರಿಲೀಸ್ ಮಾಡಿ ಸಾಕ್ಷಿ ಸಮೇತ ವಾದ ಮಾಡ್ತಿದೆ..ಅವುಗಳನ್ನ ಒಂದೊಂದಾಗಿ ತೊರಿಸ್ತಿವಿ ನೋಡಿ..
ಕೊಪ್ಪಳದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದರೆ ನಮ್ಮದೇನು ಅಭ್ಯಂತರವಿಲ್ಲ: ರಾಘವೇಂದ್ರ ಹಿಟ್ನಾಳ್
ಸಾಕ್ಷಿ 1 ದಿನಾಂಕ: 5 ಜನವರಿ 2024 ಸ್ಥಳ: ಮರತ್ತಹಳ್ಳಿ ಬ್ರಿಡ್ಜ್ ಏಕಾಏಕಿ ಬಿದ್ದ ಬೈಕ್ ಸವಾರ..ಚಾಲಕನ ಮೇಲೆ ಹರಿದ ಬಿಎಂಟಿಸಿ ಬಸ್ —– GFX 2: ಸಾಕ್ಷಿ 2 ದಿನಾಂಕ: 8 ಜನವರಿ 2024 ಸ್ಥಳ: ಉತ್ತರಹಳ್ಳಿ ಮುಖ್ಯರಸ್ತೆ ಸ್ಕಿಡ್ ಆದ ಬೈಕ್ ಬಸ್ ಚಕ್ರಕ್ಕೆ ಸಿಲುಕಿ ಸವಾರ ಸಾವು —– GFX 3: ಸಾಕ್ಷಿ 3 ದಿನಾಂಕ: 25 ಅಕ್ಟೋಬರ್ 2023 ಸ್ಥಳ: ಬೆಳಂದೂರು ಪೆಟ್ರೋಲ್ ಬಂಕ್ ಸಮೀಪ ಕಂಟ್ರೊಲ್ ಕಳೆದುಕೊಂಡ ಬೈಕ್..ಮತ್ತೊಂದು ಬೈಕ್ ಗೆ ಡಿಕ್ಕಿ —– GFX 4: ಸಾಕ್ಷಿ 4 ದಿನಾಂಕ: 29-10-2023 ಸ್ಥಳ: ಗೋವಿಂದ ರಾಜನಗರ ಸಮೀಪ ವೇಗವಾಗಿ ಬಂದು ಸ್ಕಿಡ್ ಆದ ಬೈಕ್..ಬಿಎಂಟಿಸಿ ಚಕ್ರಕ್ಕೆ ಸಿಲುಕಿದ ಸವಾರ —– GFX 5: ಸಾಕ್ಷಿ 5: ದಿನಾಂಕ: 13-01-2024 ಸ್ಥಳ: ಗ್ರಾಫೈಟ್ ಇಂಡಿಯಾ ರೋಡ್ ಬ್ರೂಕ್ ಫೀಲ್ಡ್ ಅಡ್ಡದಿಡ್ಡಿ ಬೈಕ್ ಚಲನೆ..ಬಿಎಂಟಿಸಿ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ —-
ಇವು ಬೈಕ್ ಸವಾರ ನಿರ್ಲಕ್ಷ್ಯಕ್ಕೆ ಬಿಎಂಟಿಸಿಗೆ ಸಿಕ್ಕ ಸಾಕ್ಷಿಗಳು. ಬಿಎಂಟಿಸಿಗೆ ಬೈಕ್ ಸವಾರರೇ ತಲೆನೋವಾಗಿದ್ದಾರೆ. ಹೀಗಾಗಿ ಆರ್ಟಿಓ ಹಾಗೂ ಪೊಲೀಸ್ ಇಲಾಖೆ ಕದ ತಟ್ಟೋಕೆ ಬಿಎಂಟಿಸಿ ಮುಂದಾಗಿದೆ. ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆಗೆ ಪತ್ರ ಬರೆದು ಲೈಸನ್ಸ್ ಇಲ್ಲದೆ ಬೈಕ್ ಓಡಿಸುವರ ಮೇಲೆ ಪೊಲೀಸ್ ಹಾಗೂ ಆರ್ ಟಿ ಓ ನಿಗಾ ಇಡಬೇಕು ಅಂತ ಆಗ್ರಹಿಸಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ಬಸ್ ಆಕ್ಸಿಡೆಂಟ್ ರೇಟ್ ಇಳಿಕೆ ಆಗುತ್ತೆ ಎನ್ನುತ್ತಿದೆ ಬಿಎಂಟಿಸಿ.
ಅಲ್ದೆ ನಗರದಲ್ಲಿ ದಿನೇ ದಿನೇ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರಾಕೆಟ್ ವೇಗದಲ್ಲಿ ಏರ್ತಿರುವ ವಾಹನಗಳಿಂದ ಅಪಘಾತ ಸಂಭವಿಸ್ತಿವೆ. ದೇಶದಲ್ಲಿ ಅತಿ ಹೆಚ್ಚು ಬೈಕ್ ಹೊಂದಿರೋದನ್ನ ಕೂಡ ಅಕ್ಕಿಅಂಶ ಬಿಚ್ಚಿಡ್ತಿದೆ. ಇನ್ನು ಬಿಎಂಟಿಸಿ ಬಸ್ಗಳು ಅಪಘಾತಕ್ಕೀಡಾಗುತ್ತಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಂಸ್ಥೆ ಪ್ರತಿದಿನ ಚಾಲಕರಿಗೆ ಜಾಗೃತಿ ಕುರಿತ ಕಾರ್ಯಾಗಾರಗಳನ್ನ ಹಮ್ಮಿಕೊಳ್ತಿದೆ. ಒಟ್ಟಾರೆ ಲಕ್ಷಾಂತರ ಮಂದಿ ಪ್ರಯಾಣಿಕರ ವಿಶ್ವಾಸಾರ್ಹ ಸಾರಿಗೆ ವ್ಯವಸ್ಥೆಗೆ ಹೆಸರುವಾಸಿಯಾಗಿರುವ ಬಿಎಂಟಿಸಿ ಸುಧಾರಿಸಲಿ. ಹೆಚ್ಚಿನ ಜವಾಬ್ದಾರಿಯೊಂದಿಗೆ ಕೆಲಸ ಮಾಡಲಿ ಅನ್ನೋದೆ ಎಲ್ಲರ ಆಶಯ.