ಬೆಂಗಳೂರು:- ಜಮೀರ್ ಅಹ್ಮದ್ ಖಾನ್ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಸಚಿವರ ಚುನಾವಣಾ ತಕರಾರು ಅರ್ಜಿ ವಜಾ ಮಾಡಲಾಗಿದೆ.
ಐದು ಭಾಗ್ಯಗಳ ಯೋಜನೆಯಿಂದ ರಾಜ್ಯ ಸರ್ಕಾರ ದಿವಾಳಿ -ಯತ್ನಾಳ ..!
ಜಮೀರ್ ಅಹ್ಮದ್ ಖಾನ್ ಆಯ್ಕೆ ಪ್ರಶ್ನಿಸಿ ಅದೇ ಕ್ಷೇತ್ರದ ಮತದಾರ ಶಶಾಂಕ್ ಜೆ. ಶ್ರೀಧರ್ ಅವರು ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾ.ಎಂ.ಐ.ಅರುಣ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ” ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರೆಂಟಿ ಪಕ್ಷಗಳ ತಪ್ಪು ಯೋಜನೆ ಎನ್ನಬಹುದು, ಆದರೆ ಚುನಾವಣಾ ಅಕ್ರಮವೆಂದು ಕರೆಯಲು ಸಾಧ್ಯವಿಲ್ಲ. ಜನಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 123ರ ಅನ್ವಯ ಪಕ್ಷದ ಪ್ರಣಾಳಿಕೆಯನ್ನು ಅಕ್ರಮ ಎಂದು ಹೇಳಲು ಆಗುವುದಿಲ್ಲ. ಕಾಂಗ್ರೆಸ್ನ ಐದು ಗ್ಯಾರಂಟಿ ಜನ ಕಲ್ಯಾಣ ಯೋಜನೆಗಳೆನ್ನಬಹುದು. ಗ್ಯಾರೆಂಟಿಯಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯೇ ಅಲ್ಲವೇ ಬೇರೆ ವಿಚಾರ, ಗ್ಯಾರಂಟಿಗಳಿಂದ ಹೇಗೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ. ಇದು ದುರಾಡಳಿತವೆಂಬುದನ್ನು ನಿರೂಪಿಸುವುದು ಪ್ರತಿಪಕ್ಷಕ್ಕೆ ಬಿಟ್ಟದ್ದು. ಪ್ರಸ್ತುತ ಸ್ಥಿತಿಯಲ್ಲಿ 5 ಗ್ಯಾರಂಟಿ ತಪ್ಪು ನೀತಿಯೆನ್ನಬಹುದು. ಆದರೆ, ಇದು ಚುನಾವಣಾ ಭ್ರಷ್ಟಾಚಾರ ಎನ್ನಲು ಸಾಧ್ಯವಿಲ್ಲ” ಎಂದು ಹೇಳಿದೆ.
ನ್ಯಾಯಾಲಯ ಸುಪ್ರೀಂಕೋರ್ಟ್ನ ತೀರ್ಪು ಉಲ್ಲೇಖಿಸಿ “ಪ್ರಣಾಳಿಕೆಯಲ್ಲಿನ ಉಚಿತ ಕೊಡುಗೆಗಳಿಂದ ಮತದಾರರ ಮೇಲೆ ಪ್ರಭಾವ ಬೀರಬಹುದು. ಉಚಿತ ಕೊಡುಗೆಗಳಿಂದ ಪಕ್ಷಗಳ ನಡುವೆ ಸಮಾನತೆ ಇರುವುದಿಲ್ಲ. ಚುನಾವಣಾ ಆಯೋಗ ಈ ಬಗ್ಗೆ ಮಾರ್ಗಸೂಚಿ ರೂಪಿಸಬೇಕು. ಈ ಬಗ್ಗೆ ಸೂಕ್ತ ಶಾಸನ ರೂಪಿಸಬೇಕು ಅಂತ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ ಎಂದು ಹೈಕೋರ್ಟ್ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿ, ಆದೇಶ ಹೊರಡಿಸಿದೆ.