ಬೆಂಗಳೂರಿನ ವೈಯಾಲಿಕಾವಲ್ ನಗರ ನಿವಾಸಿ ಮಹಾಲಕ್ಷ್ಮೀ ಕೊಲೆ ದೇಶಾದ್ಯಂತ ಸುದ್ದಿಯಾಗಿದೆ. ಮಹಾಲಕ್ಷ್ಮೀ ಕೊಲೆಗೆ ಸಂಬಂಧಿಸಿಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಇಂದು ಸುದ್ದಿಗೋಷ್ಠಿ ನಡೆಸಿದ್ದಾರೆ.
ವೈಯಾಲಿಕಾವಲ್ನ ಮಹಾಲಕ್ಷ್ಮಿ ಹಂತಕ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಅರೆಸ್ಟ್ ಮಾಡುವ ಹುಮ್ಮಸ್ಸಿನಲ್ಲಿ ಪೊಲೀಸರು ಹಂತಕ ಮುಕ್ತಿ ರಾಜನ್ ರಾಯ್ ಹುಟ್ಟೂರಾದ ಒಡಿಶಾದ ಭದ್ರಕ್ ಬಳಿಯ ಬೋನಿಪುರ ಗ್ರಾಮ ತಲುಪಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಸಾಯುವ ಮುನ್ನ ಡೆತ್ನೋಟ್ ಬರೆದಿಟ್ಟಿದ್ದ ಹಂತಕ ಮಹಾಲಕ್ಷ್ಮಿ ಕೆಲಸ ಮಾಡುವ ಸ್ಥಳದಲ್ಲಿ ನಾನು ಸ್ಟೋರ್ ಮ್ಯಾನೇಜರ್ ಆಗಿದ್ದೆ. ಇಬ್ಬರೂ ಸ್ನೇಹಿತರಾಗಿದ್ದೆವು. ಬಳಿಕ ಲಿವಿಂಗ್ ರಿಲೇಷನ್ಶಿಪ್ನಲ್ಲಿದ್ದೆವು ಎಂದು ಬರೆದುಕೊಂಡಿದ್ದಾನೆ.
ಮಹಾಲಕ್ಷ್ಮೀಯನ್ನು ಕೊಲೆ ಮಾಡಿದ ಬಳಿಕ ಆರೋಪಿ ಮುಕ್ತಿ ರಂಜನ್ ರಾಯ್ ಬಜಾಜ್ ಪ್ಲಾಟಿನಂ ಬೈಕ್ನಲ್ಲಿ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮಾರ್ಗವಾಗಿ 1,550 ಕಿಮೀ ಸಾಗಿ ತನ್ನ ಊರಾದ ಒಡಿಶಾದ ಭದ್ರಕ್ ಬಳಿಯ ಬೋನಿಪುರಗೆ ತೆರಳಿದ್ದಾನೆ. ಕೊಲೆ ಮಾಡಿದ ಬಳಿಕ ಆರೋಪಿ ಮುಕ್ತಿ ರಂಜನ್ ಮೊದಲು ಹೆಬ್ಬಗೋಡಿಯ ಸಹೋರನ ಮನೆಗೆ ತೆರಳಿದ್ದನು.
ತಮ್ಮನಿಗೆ ಮಹಾಲಕ್ಷ್ಮೀಯನ್ನು ಕೊಲೆ ಮಾಡಿರುವ ಬಗ್ಗೆ ತಿಳಿಸಿ, ಯಾರಿಗೂ ಈ ವಿಚಾರ ಹೇಳಬೇಡ ಬೇಗ ರೂಮ್ ಖಾಲಿ ಮಾಡು ಎಂದು ಹೇಳಿ ಬೈಕ್ನಲ್ಲೇ ಒಡಿಶಾಗೆ ತೆರಳಿದ್ದಾನೆ. ಊರಿಗೆ ತಲುಪಿದ ಬಳಿಕ ಆರೋಪಿ ರಂಜನ್ ಕೊಲೆ ಮಾಡಿದ ವಿಚಾರವನ್ನು ತಾಯಿಗೆ ತಿಳಿಸಿದ್ದಾನೆ. ಕೊನೆಯದಾಗಿ ತಂದೆ-ತಾಯಿಯನ್ನು ಭೇಟಿಯಾಗಿ, ಆರೋಪಿ ಮುಕ್ತಿ ರಂಜನ್ ನೇಣಿಗೆ ಶರಣಾಗಿದ್ದಾನೆ.
ಸೆ.2 ರಂದು ಮಹಾಲಕ್ಷ್ಮಿಯ ಮನೆಗೆ ತೆರಳಿದ್ದ ಹಂತಕ ಹಾಗೂ ಮಹಾಲಕ್ಷ್ಮಿಯ ನಡುವೆ ಜಗಳವಾಗಿದೆ. ಮದುವೆ ಆಗು ಅಂತಾ ಮಹಾಲಕ್ಷ್ಮಿ ಒತ್ತಾಯಿಸಿದ್ದಕ್ಕೆ ನಿನಗೆ ಈಗಾಗಲೇ ಮದುವೆಯಾಗಿ ಮಗುವಿದೆ. ಹೀಗಿದ್ದಂಗೆ ಲೀವಿಂಗ್ ರಿಲೇಶನ್ನಲ್ಲೇ ಇರೋಣ ಅಂತಾ ಹಂತಕ ಹೇಳಿದ್ದನಂತೆ. ಈ ನಡುವೆ ಜಗಳವಾಗಿ ಮಹಾಲಕ್ಷ್ಮಿ, ಮುಕ್ತಿ ರಂಜನ್ ರಾಯ್ ಮೇಲೆ ಹಲ್ಲೆ ಮಾಡಿದ್ದಳಂತೆ. ಕೋಪದಿಂದ ಮಹಾಲಕ್ಷ್ಮಿ ಕಪಾಳಕ್ಕೆ ಮುಕ್ತಿ ಹೊಡೆದಾಗ ಪ್ರಜ್ಞೆ ತಪ್ಪಿ ಮಹಾಲಕ್ಷಿ ಬಿದ್ದಿದ್ದಾಳೆ.
ಪ್ರಜ್ಞೆ ತಪ್ಪಿ ಬಿದ್ದ ಮಹಾಲಕ್ಷ್ಮಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಹಂತಕ ಮಲ್ಲೇಶ್ವರದಲ್ಲಿ ಆ್ಯಕ್ಸೆಲ್ ಬ್ಲೇಡ್ ಮತ್ತು ಚಾಕು ಖರೀದಿಸಿ ಹಾಲ್ನಲ್ಲಿದ್ದ ಶವವನ್ನ ಸ್ನಾನದ ಮನೆಗೆ ಎಳೆದೊಯ್ದು 59 ಪೀಸ್ಗಳನ್ನಾಗಿ ಕತ್ತರಿಸಿದ್ದ. ಬಳಿಕ ಹೆಬ್ಬಗೋಡಿಯ ಸಹೋದರನ ಮನೆಗೆ ಹೋಗಿ ನಡೆದ ಕೃತ್ಯ ಹೇಳಿದ್ದ. ಅದಾದ ಬಳಿಕ ತನ್ನ ಬೈಕ್ನಲ್ಲೇ ಮೂರು ದಿನಗಳ ಕಾಲ 1,550 ಕಿಮೀ ಸಂಚಾರ ಮಾಡಿ ಮೂರು ರಾಜ್ಯಗಳಾದ ಕರ್ನಾಟಕ, ಆಂಧ್ರ, ಒಡಿಶಾ ಕ್ರಾಸ್ ಮಾಡಿ ತನ್ನೂರಾದ ಬೋನಿಪುರ ತಲುಪಿದ್ದ. ಹಂತಕನನ್ನ ಪೊಲೀಸರು ಹುಡುಕ್ತಿದ್ದಾರೆ ಅಂತಾ ಗೊತ್ತಾದಾಗ ತಾಯಿ ಬಳಿ ಎಲ್ಲವನ್ನೂ ಹೇಳಿದ್ದನಂತೆ. ಬೆಳಗಿನ ಜಾವ ಮನೆಯಿಂದ ಹೊರಗೆ ಬಂದು ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.